ಡಿಕೆಶಿ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದ ಅಶೋಕ್

ಗುರುವಾರ, 24 ಆಗಸ್ಟ್ 2023 (21:10 IST)
ಡಿಕೆಶಿ ವಿರುದ್ಧ ಪರೋಕ್ಷವಾಗಿ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.ಎದುರಾಳಿಗಳನ್ನು ಸೆಳೆಯಲು ಅಧಿಕಾರಿಗಳ ಬಳಕೆ ಮಾಡಿಕೊಳ್ತಿದ್ದಾರೆ ಎಂದು ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.ಅಧಿಕಾರಿ ಒಬ್ಬರು ನನ್ನ ಹೇಳಿದರು.ಕೆಲಸ ಸರಿಯಿದೆಯೋ ಇಲ್ಲವೋ ಗೊತ್ತಿಲ್ಲ.ರೋಡ್ ಕೆಲಸ, ಮೋರಿ ಕೆಲಸ ಸರಿಯಿದೆಯೋ ಗೊತ್ತಿಲ್ಲ.ನನಗೆ ನೆಗೆಟಿವರ ರಿಪೋರ್ಟ್ ಬೇಕು.ಸರಿಯಿದ್ದರೂ ನೆಗೆಟಿವ್ ರಿಪೋರ್ಟ್ ಬೇಕು.ಸರಿಯಿಲ್ಲಂದ್ರೂ ನೆಗೆಟಿವ್ ರಿಪೋರ್ಟ್ ಬೇಕು ಎಂದಿದ್ದಾರೆ.ಅಂತಹ ಮನಃಸ್ಥಿತಿಯವರು ಕಾಂಗ್ರೆಸ್‌ನವರು ಎಲ್ಲೆಲ್ಲಿ ಬೆದರಿಕೆ ಹಾಕಬಹುದೋ ಅಲ್ಲಿ ಹಾಕ್ತಿದ್ದಾರೆ ಎಂದು ಆರ್ ಅಶೋಕ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ