ಕೊನೆಗೂ ಪ್ರತಿಭಟನೆ ಹಿಂಪಡೆದು ಸಿಎಂಗೆ ಎಚ್ಚರಿಕೆ ನೀಡಿದ ಉತ್ತರ ಕನ್ನಡ ಭಾಗದವರು

ಶನಿವಾರ, 30 ಜುಲೈ 2022 (17:24 IST)
ಉತ್ತರ ಕನ್ನಡ
ಉತ್ತರ ಕನ್ನಡಕ್ಕೆ ಏಮ್ಸ್ ಮಾದರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಗಾಗಿ ನಡೆದ ಪ್ರತಿಭಟನೆ ಕೊನೆಗೂ ಅಂತ್ಯವಾಗಿದೆ.
 
 ಉತ್ತರ ಕನ್ನಡ ಭಾಗದವರು ಸರಗಕಾರಕ್ಕೆ ಒಂದು ವಾರ ಗಡುವು ನೀಡಿದ್ದಾರೆ.ಒಂದು ವಾರದ ಗಡುವು ನೀಡಿ ಪ್ರತಿಭಟನೆಯನ್ನ ಪ್ರತಿಭಟನಾಕಾರರು ಅಂತ್ಯಗೊಳಿಸಿದ್ದಾರೆ.ವಾರದೊಳಗೆ ಆಸ್ಪತ್ರೆಯ ವಿಚಾರದಲ್ಲಿ ಸಿಎಂ ಘೋಷಣೆ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.ಇಲ್ಲದೇ ಹೋದ್ರೆ ಮತ್ತೆ ಹೋರಾಟ ಮಾಡೋದಾಗಿ ಉತ್ತರ ಕನ್ನಡ ಹೋರಾಟ ಸಮಿತಿ ಎಚ್ಚರಿಕೆ ರವಾನಿಸಿದೆ.
 
ಪ್ರತಿಭಟನೆ ಬಳಿಕ ಸಿಎಂ ಕಾರ್ಯದರ್ಶಿಗೆ ಮುಖಂಡರು ಮನವಿ ಸಲ್ಲಿಸಿದಾರೆ. ಅಷ್ಟೇ ಅಲ್ಲದೆ ಮುಂದೆ ಬೇಡಿಕೆ ಈಡೇರದೆ ಹೋದಲಿ ಸಿಎಂ ಮನೆ ಮುಂದೆ ಉಪವಾಸ ಸತ್ಯಾಗ್ರಹ ಮಾಡೋ ಎಚ್ಚರಿಕೆ ನೀಡಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ