ಆಣೆ ಪ್ರಮಾಣ ವಿಚಾರ; ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ನಾಯಕರು

ಗುರುವಾರ, 17 ಅಕ್ಟೋಬರ್ 2019 (10:11 IST)
ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಹೆಚ್ ವಿಶ್ವನಾಥ್ ಹಾಗೂ ಸಾರಾ ಮಹೇಶ್ ಅವರು ಚಾಮುಂಡಿ ಸನ್ನಿದಿಗೆ ಭೇಟಿ ನೀಡಿದ್ದಾರೆ.




ಸಾರಾ ಮಹೇಶ್ ಅವರು ಸದನದಲ್ಲಿ , ಹೆಚ್ ವಿಶ್ವನಾಥ್ ಅವರು 25ಕೋಟಿಗೆ ತಮ್ಮನ್ನ ಮಾರಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದನ್ನು ವಿಶ್ವನಾಥ್ ಅವರು ಅಲ್ಲಗೆಳೆದ ಹಿನ್ನಲೆಯಲ್ಲಿ ಇಂದು ಚಾಮುಂಡಿ ಸನ್ನಿದಿಯಲ್ಲಿ ಆಣೆ ಪ್ರಮಾಣ ಮಾಡಲು ಮುಂದಾಗಿದ್ದರು. ಇದೀಗ ಇಬ್ಬರು ನಾಯಕರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.


ಆದರೆ ಈ ಬಗ್ಗೆ  ಮಾತನಾಡಿದ ಹೆಚ್ ವಿಶ್ವನಾಥ್, ನಾನು ಯಾವುದೇ ಆಣೆ ಪ್ರಮಾಣಕ್ಕೆ ಬಂದಿಲ್ಲ. ನನ್ನ ಖರೀದಿ ಮಾಡಿದ ವ್ಯಕ್ತಿಯನ್ನು ಸ್ವಾಗತಿಸಲು ಬಂದಿದ್ದೇನೆ ಎಂದು ಉಲ್ಟಾ ಹೊಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ