ಹೆಚ್.ವಿಶ್ವನಾಥ್ ಗೆ ಸವಾಲು ಹಾಕಿದ ಸಾರಾ ಮಹೇಶ್

ಬುಧವಾರ, 16 ಅಕ್ಟೋಬರ್ 2019 (11:31 IST)
ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣಕ್ಕೆ ನಾನು ರೆಡಿ ಎಂದು ಹೆಚ್.ವಿಶ್ವನಾಥ್ ಗೆ ಸಾರಾ ಮಹೇಶ್ ಸವಾಲು ಹಾಕಿದ್ದಾರೆ.




ಈ ಬಗ್ಗೆ ಮಾತನಾಡಿದ ಸಾ.ರಾ.ಮಹೇಶ್, ನಾಳೆ ಬೆಳಿಗ್ಗೆ 9 ಗಂಟೆಗೆ ನಾನೂ ಚಾಮುಂಡಿ ಬೆಟ್ಟಕ್ಕೆ ಬರುತ್ತೇನೆ, ಆಸೆ, ಆಮಿಷ, ಹಣದಾಸೆಗೆ ಬಲಿಯಾಗಿಲ್ಲ ಅಂತ ವಿಶ್ವನಾಥ್ ಪ್ರಮಾಣ ಮಾಡಲಿ. ವಿಶ್ವನಾಥ್ ಪ್ರಮಾಣ ಮಾಡಿದರೆ ನಾನು ಬೇಷರತ್  ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.


ಅಲ್ಲದೇ ಕೇವಲ ದುಡ್ಡಿನ ವಿಚಾರವಲ್ಲ, ವೈಯಕ್ತಿಕ ಟೀಕೆಗಳು ಸತ್ಯ ಎಂದು ಪ್ರಮಾಣ ಮಾಡಿ. ಡಿವೈಎಸ್ ಪಿ ಸುಂದರ್ ರಾಜ್ ವರ್ಗಾವಣೆಗೆ ಎಷ್ಟು ಹಣ ಪಡೆದ್ರಿ ಅಂತ  ಗೊತ್ತು ಎಂದು  ವಿಶ್ವನಾಥ್ ವಿರುದ್ಧ  ಸಾರಾ ಮಹೇಶ್ ಹರಿಹಾಯ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ