ಬಾಡಿಗೆಗೆ ಬರಲು ಒಪ್ಪದ ಆಟೋ ಚಾಲಕನ ಬರ್ಬರ ಹತ್ಯೆ!

ಶುಕ್ರವಾರ, 19 ಆಗಸ್ಟ್ 2016 (10:50 IST)
ಬಾಡಿಗೆಗೆ ಬರಲು ಒಪ್ಪದ ಕಾರಣಕ್ಕಾಗಿ ಆಟೋ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ವಿನೋಬನಗರದಲ್ಲಿ ನಡೆದಿದೆ.
 
ಗುರುವಾರ ಮತ್ತು ಶುಕ್ರವಾರದ ನಡುವಿನ ರಾತ್ರಿ ಸುಮಾರು 1 ಗಂಟೆಗೆ ಈ ದುರ್ಘಟನೆ ನಡೆದಿದ್ದು ಮೃತನನ್ನು 
ಅಬ್ದುಲ್ ರಹೀಮ್ (32) ಎಂದು ಗುರುತಿಸಲಾಗಿದೆ. 
 
ಕಳೆದ ನಾಲ್ಕು ದಿನಗಳ ಹಿಂದೆ ಜಾವೇದ್ ಎಂಬಾತ ರಹೀಮ್ ಬಳಿ ಬಾಡಿಗೆಗೆ ಬರುವಂತೆ ಕೇಳಿದ್ದ.ಜಾವೇದ್ ಪಿಕ್ ಪಾಕೆಟ್ ಮಾಡುತ್ತಿದ್ದಾನೆ ಎಂಬ ಆರೋಪವನ್ನು ಹೊತ್ತಿರುವುದರಿಂದ ಆತನೊಂದಿಗೆ ಬಾಡಿಗೆಗೆ ಹೊೋಗಲು ನಿರಾಕರಿಸಿದ್ದ. ಈ ಕ್ಷುಲ್ಲಕ ಕಾರಣಕ್ಕೆ ರಹೀಮ್ ಮೇಲೆ ಕೋಪಗೊಂಡ ಜಾವೇದ್ ಮಧ್ಯರಾತ್ರಿ ಸಹಚರರೊಡನೆ ಆಗಮಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
 
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ