ವಾಲ್ಮೀಕಿ ಹಗರಣ ಎಷ್ಟು ಕೋಟಿ, ವಂಚನೆಯಾಗಿದ್ದು ಹೇಗೆ ಎಂದ ಬಿಜೆಪಿ ನಾಯಕ ಬಂಗಾರು ಹನುಮಂತು

Krishnaveni K

ಗುರುವಾರ, 26 ಜೂನ್ 2025 (20:28 IST)
Photo Credit: X
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಮತ್ತೊಂದು ಹಗರಣ ನಡೆದಿದ್ದು, ಸುಮಾರು 500 ಕೋಟಿಯಿಂದ 600 ಕೋಟಿ ಮೊತ್ತದ ಹಗರಣ ಇದಾಗಿರುವ ಸಾಧ್ಯತೆ ಇದೆ ಎಂದು ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಅವರು ಆರೋಪಿಸಿದ್ದಾರೆ.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ನೂರಾರು ಕೋಟಿ ಹಣವನ್ನು ದೋಚಿ ಬಳ್ಳಾರಿಯ ಲೋಕಸಭಾ ಚುನಾವಣೆಗೆ ಖರ್ಚು ಮಾಡಿದ್ದರು. ಪ್ರಸ್ತುತ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದಿಂದ ದಿನೇದಿನೇ ಹೊಸದಾಗಿ ಬೆಳಕಿಗೆ ಬರುವ ಹಗರಣಗಳನ್ನು ನೋಡಿದರೆ ನೂರಾರು ಕೋಟಿಗಳ ಅವ್ಯವಹಾರ ಆಗಿರುವುದು ಕಂಡುಬರುತ್ತಿದೆ ಎಂದು ತಿಳಿಸಿದರು.
 
ತುಮಕೂರು ಜಿಲ್ಲೆಯ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 2019-20ನೇ ಸಾಲಿನಲ್ಲಿ ಸ್ವಯಂ ಉದ್ಯಮಶೀಲತಾ ಸಾಲದ ಯೋಜನೆಗೆ ವಾಲ್ಮೀಕಿ ಸಮಾಜದ ಅನೇಕ ಯುವಜನರು ಅರ್ಜಿ ಸಲ್ಲಿಸಿದ್ದರು.
ಆದರೆ ಯಾವುದೇ ಫಲಾನುಭವಿಗಳಿಗೆ ಸಾಲ ಮಂಜೂರು ಆಗಿರಲಿಲ್ಲ. ಪ್ರಸ್ತುತ 2024-25ನೇ ಸಾಲಿನಲ್ಲಿಯೂ ಅರ್ಜಿ ಸಲ್ಲಿಸಿದಾಗ ನಿಗಮದ ತಾಲ್ಲೂಕು ವ್ಯವಸ್ಥಾಪಕ ನಿರ್ದೇಶಕರಾದ ಭಾಗೀರಥಿ ರವರು ‘ನಿಮಗೆ ಈಗಾಗಲೇ ಸಾಲವನ್ನು ನೀಡಲಾಗಿದೆ’ ಎಂದು ಫÀಲಾನುಭವಿಗಳಿಗೆ ಹೇಳಿದ್ದಾರೆ. ಆದರೆ ಆ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿದಾಗ ಯಾವುದೇ ರೀತಿಯ ಸಾಲವನ್ನು ಪಡೆದಿರುವುದಿಲ್ಲ. ಫಲಾನುಭವಿಗಳ ಹೆಸರಿನಲ್ಲಿ ಸಾಲ ಪಡೆದಿರುವ ಬಗ್ಗೆ ದಾಖಲೆ ಕೊಡಿ ಎಂದು ಕೇಳಿದರೆ ಅವನ್ನು ಕೊಡಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದರು.
 
ಬೋಗಸ್ ಸಹಿ ಹಾಕಿ ಕೋಲಾರದಲ್ಲಿ ಹಣ ಪಡೆದರು
ನಿಗಮದಿಂದ ಫಲಾನುಭವಿಗಳಿಗೆ ಸಾಲದ ಹಣವನ್ನು ನೀಡಿರುವ ಬಗ್ಗೆ ಪರಿಶೀಲಿಸಿದಾಗ ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ತಾಲ್ಲೂಕಿನ ಫಲಾನುಭವಿಗಳ ಹೆಸರಿನಲ್ಲಿ 2 ಲಕ್ಷ ಹಣದ ಅನುದಾನವನ್ನು ಬಿಡುಗಡೆ ಮಾಡಿರುತ್ತಾರೆ. ಈ ಅನುದಾನವನ್ನು ಬೋಗಸ್ ಸಹಿ ಮೂಲಕ ಕೋಲಾರದ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಹಣವನ್ನು ಡ್ರಾ ಮಾಡಿರುತ್ತಾರೆ. ಸದರಿ ಹಣವನ್ನು ನಿಗಮದ ಅಧಿಕಾರಿಗಳು, ಸಚಿವರು ಮತ್ತು ಶಾಸಕರು ಬಳಸಿಕೊಂಡಿರುತ್ತಾರೆ ಎಂದು ಬಂಗಾರು ಹನುಮಂತು ಅವರು ದೂರಿದರು. 
 
ತುಮಕೂರು ಜಿಲ್ಲೆಯಲ್ಲಿ ನಿಗಮದಿಂದ ಸುಮಾರು 1 ಕೋಟಿ 24 ಲಕ್ಷ ಹಣವನ್ನು ದೋಚಿದ್ದಾರೆ. ಇದೇ ರೀತಿ ಕರ್ನಾಟಕದ ರಾಜ್ಯಾದ್ಯಂತ ಪತ್ರಿ ಜಿಲ್ಲೆಯ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ವಾಲ್ಮೀಕಿ ಸಮಾಜದ ಫಲಾನುಭವಿಗಳ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ದೋಚಿದ್ದಾರೆ ಎಂದು ಆರೋಪಿಸಿದರು. ನಾವು ಹುಡುಕುತ್ತಾ ಹೋದರೆ ಕಾಂಗ್ರೆಸ್ ಸರ್ಕಾರದಿಂದ ಸುಮಾರು 500 ರಿಂದ 600 ಕೋಟಿ ಹಣ ಅವ್ಯವಹಾರವಾಗಿರುವುದು ಕಂಡುಬರುತ್ತದೆ ಎಂದು ದೂರಿದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಾಲ್ಮೀಕಿ ಸಮುದಾಯ ಮತ್ತು ಜನರು ಅಭಿವೃದ್ಧಿ ಆಗಬಾರದೆಂದು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಸರ್ಕಾರದಿಂದ ಬೋವಿ ಸಮಾಜದ ನಿಗಮ, ಬಂಜಾರ ಸಮಾಜದ ನಿಗಮ, ಒಕ್ಕಲಿಗ ಸಮಾಜದ ನಿಗಮ ಮತ್ತು ಲಿಂಗಾಯಿತ ಸಮಾಜದ ನಿಗಮ ಹಾಗೂ ಇತರೆ ಎಲ್ಲ ಸಮಾಜದ ನಿಗಮದಲ್ಲೂ ಕೂಡ ಅವ್ಯವಹಾರ ಆಗಿದೆ ಎಂದು ಆರೋಪಿಸಿದರು.
 
ಅಧಿಕಾರಿಗಳ ಅಮಾನತು ಮಾಡಿ ತನಿಖೆ ನಡೆಸಿ
ತುಮಕೂರು ಜಿಲ್ಲೆಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ್ ಅವರು ಮೊಬೈಲ್‍ನಲ್ಲಿ ಮಾತನಾಡಿರುವ ಆಡಿಯೋ ಸಂಭಾಷಣೆಯನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಸಮಾಜದ ಬಗ್ಗೆ ಕಾಳಜಿ ಇದ್ದರೆ ತುಮಕೂರಿನ ಹಿಂದಿನ ಅವಧಿಯಲ್ಲಿ ಅವ್ಯವಹಾರ ಎಸಗಿರುವ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಹಾಗೂ ಇಂದಿನ ಅಧಿಕಾರಿಗಳಾದ ಶ್ರೀಧರ್, ಭಾಗೀರಥಿ ಮತ್ತು ನಾಗೇಂದ್ರ ಅವರನ್ನು ಅಮಾನತಿನಲ್ಲಿರಿಸಬೇಕು. ಸಮಗ್ರ ತನಿಖೆ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಲು ಬಂಗಾರು ಹನುಮಂತು ಅವರು ಆಗ್ರಹಿಸಿದರು.
 
ನಾರಾಯಣಸ್ವಾಮಿ ಅವರ ಲೆಟರ್‍ಹೆಡ್ ಅನ್ನು ಸಿದ್ಧಪಡಿಸಿ ನಕಲಿ ಸಹಿ ಮಾಡಿದ್ದಾರೆ ಎಂದು ಅವರು ದೂರಿದರು. ಅಧಿಕಾರಿಗಳು ಈಗ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡ ದಿನದಿಂದ ದಿನನಿತ್ಯ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ ಎಂದು ಟೀಕಿಸಿದರು.

ನಿಮ್ಮ ಸರ್ಕಾರ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ವಾಲ್ಮೀಕಿ ಸಮಾಜದ ಜನಾಂಗದಿಂದ ಬೆಂಗಳೂರಿನ ವಾಲ್ಮೀಕಿ ನಿಗಮಕ್ಕೆ ಮುತ್ತಿಗೆ ಹಾಕಿ ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
 
2019ರಿಂದ ಈ ವರೆಗೆ ಅರ್ಜಿ ಹಾಕಿದ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಹಾಕಬೇಕು. ಆಧಾರ್, ಪ್ಯಾನ್ ಕಾರ್ಡ್ ಬಳಸಿ ಫಲಾನುಭವಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು s ಹಣ ಪಡೆದಿರುವ ಸಾಧ್ಯತೆ ಇದೆ. ಸಂಬಂಧಿತ ಕಚೇರಿಗೆ ಹೋಗಿ ಇದನ್ನು ಕೂಲಂಕಷ ಪರಿಶೀಲನೆ ಮಾಡಬೇಕೆಂದು ಅವರು ಮನವಿ ಮಾಡಿದರು.
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ