ವಸತಿ ಯೋಜನೆಯಲ್ಲಿ ಅವ್ಯವಹಾರ ಆರೋಪ ಬಂದಾಗ ಪ್ರತಿಕ್ರಿಯಿಸಿದ್ದ ಬೇಳೂರು ಗೋಪಾಲಕೃಷ್ಣ, ಜಮೀರ್ ಅಹ್ಮದ್ ರಾಜೀನಾಮೆ ಕೊಡುವುದು ಸೂಕ್ತ ಎಂದಿದ್ದರು. ಅವರ ಹೇಳಿಕೆಗೆ ನಾನಾ ಅರ್ಥ ಬಂದಿದೆ. ಜಮೀರ್ ಸ್ಥಾನದ ಮೇಲೆ ಬೇಳೂರು ಕಣ್ಣಿಟ್ಟಿದ್ದಾರೆ. ಇದೇಏ ಕಾರಣಕ್ಕೆ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಎನ್ನಲಾಯಿತು.
ಇನ್ನು ಕೆಎನ್ ರಾಜಣ್ಣ ರಾಜಕೀಯ ಕ್ರಾಂತಿಯಾಗಲಿದೆ ಎಂದಿರುವ ಬಗ್ಗೆ ಪ್ರಶ್ನಿಸಿದಾಗ ಯಾವ ಕ್ರಾಂತಿಯೋ ನನಗೆ ಗೊತ್ತಿಲ್ಲ. ಏನು ಕ್ರಾಂತಿಯಾಗಲು ಸಾಧ್ಯ ಎಂದು ಮರುಪ್ರಶ್ನಿಸಿದ್ದಾರೆ. ಭಿನ್ನಮತ ಬಿಜೆಪಿಯಲ್ಲೂ ಇಲ್ವಾ? ವಿಜಯೇಂದ್ರ-ಅಶೋಕ್ ಜೊತೆಗೇ ಇದ್ದರು. ಈಗ ಯಾಕೋ ಅಶೋಕ್, ಸೋಮಣ್ಣ ಪರ ಇರುವ ಹಾಗೆ ಕಾಣ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.