ಬ್ಯಾಂಕ್ ನೋಟೀಸ್ ಸುಟ್ಟ ರೈತರು

ಶನಿವಾರ, 6 ಅಕ್ಟೋಬರ್ 2018 (17:37 IST)
ರೈತರ ಬಂಗಾರವನ್ನು ಹರಾಜು ಮಾಡಲು ವಿವಿಧ ಬ್ಯಾಂಕ್ ನೋಟೀಸಿನ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.

ರೈತರ ಆಭರಣ ಮೇಲಿನ ಸಾಲ ಮರುಪಾವತಿ ಕುರಿತು ಹಾಗೂ ಬಂಗಾರ ಆಭರಣ ಹರಾಜು ಮಾಡಲು ವಿವಿಧ ಬ್ಯಾಂಕುಗಳು ನೀಡಿರುವ ನೋಟೀಸ್ ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಂಕುಗಳ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದ ರೈತರು, ಬ್ಯಾಂಕುಗಳು ನೀಡಿದ್ದ ನೋಟೀಸಿನ ಪ್ರತಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.  

ಚಿತ್ರದುರ್ಗ ಜಿಲ್ಲಾಧಿಕಾರಿ  ಕಛೇರಿ ಆವರಣದಲ್ಲಿ ರೈತ ಸಂಘದ ಸದಸ್ಯರು ಬ್ಯಾಂಕುಗಳು ನೀಡಿದ್ದ ನೋಟೀಸನ್ನು ಸುಟ್ಟ ನಡೆದ ಘಟನೆ ನಡೆದಿದೆ.

ಚಿತ್ರದುರ್ಗ ತಾಲೂಕಿನ ಮುದ್ದಾಪುರ, ಡಿಎಸ್ ಹಳ್ಳಿಯ ಪ್ರಗತಿ ಕೃಷ್ಣಾ ಬ್ಯಾಂಕ್  ಮತ್ತು ಇತರ ಬ್ಯಾಂಕುಗಳು ರೈತರಿಗೆ ನೋಟೀಸ್ ನೀಡಿದ್ದವು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ