ಕಡಲೆಕಾಯಿ ಪರಿಷೆ ಶುರು

ಭಾನುವಾರ, 28 ನವೆಂಬರ್ 2021 (16:48 IST)
ನಾಳೆ 29 ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿಯ ಸಂಭ್ರಮ ಶುರುವಾಗಲಿದೆ ಎಂದು ಬಸವನಗುಡಿ ವಿಧಾನ ಸಭಾ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ ಹೇಳಿಕೆ ನೀಡಿದ್ದಾರೆ. ನಾವೆಲ್ಲರೂ ಕುತೂಹಲದಿಂದ ಎದುರು ನೋಡುತ್ತಿರುವ ಹಬ್ಬ, ಕಡಲೆಕಾಯಿ ಪರಿಷೆ.ಈ ಹಬ್ಬಕ್ಕೆ ತಮ್ಮೆಲರಿಗೂ ನನ್ನ ಹೃದಯಪೂರ್ವಕ ಸ್ವಾಗತ ಎಂದರು.
 
ಅಲ್ಲದೆ ಕೊರೊನಾದಿಂದ ಎಲ್ರೂ ಜಾಗರೂಕರಾಗಿರಿ, ಕೊರೊನಾ ನಿಯಮಾವಳಿಗಳ ಪಾಲಿಸಿ ಹಬ್ಬ ಆಚರಿಸಿ ಎಂದು ಸೂಚನೆ ನೀಡಿದರು. ಮಾಸ್ಕ್ ಧರಿಸೋಣ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳೊಣ. ಕೋವಿಡ್-19 ರ ಎಲ್ಲ ನಿಯಮಗಳನ್ನು ಪಾಲಿಸೋಣ, ಕಡಲೆಕಾಯಿ ಪರಿಷೆಯ ಸಂಭ್ರಮವನ್ನು ಸವಿಯೋಣ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ