ಕೊರೋನಾ ಹೆಸರಲ್ಲಿ ಈ ರೀತಿ ವಂಚಿಸುವವರಿದ್ದಾರೆ! ಹುಷಾರ್!

ಬುಧವಾರ, 18 ಮಾರ್ಚ್ 2020 (09:27 IST)
ಬೆಂಗಳೂರು: ಕೊರೋನಾವೈರಸ್ ದೇಶದೆಲ್ಲೆಡೆ ಮರಣ ಭಯ ಸೃಷ್ಟಿಸಿದ್ದರೆ ಇದನ್ನೇ ಕೆಲವು ಕಿಡಿಗೇಡಿಗಳು ತಮ್ಮ ದುರ್ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ.

 

ಕೊರೋನಾ ಹರಡದಂತೆ ಸರ್ಕಾರ ಮನೆ ಮನೆಗೆ ಸ್ಯಾನಿಟೈಸ್ ಮಾಡಲು ಹೇಳಿದೆ ಎಂದು ಕೆಲವು ಕಿಡಿಗೇಡಿಗಳ ಗುಂಪು ಬಂದು ಕಳ್ಳತನ, ದರೋಡೆ ಮಾಡಲು ಯತ್ನಿಸುತ್ತಿದೆ.

ಸರ್ಕಾರ ಇಂತಹ ಯಾವುದೇ ಕ್ರಮ ಕೈಗೊಳ್ಳಲು ಯಾರಿಗೂ ಸೂಚಿಸಿಲ್ಲ. ಹೀಗಾಗಿ ಸ್ಯಾನಿಟೈಸ್ ಮಾಡುವ ಸೋಗಿನಲ್ಲಿ ಬಂದು ಕಳ್ಳತನ ಇತ್ಯಾದಿ ತೊಂದರೆ ಕೊಡುವವರ ವಿರುದ್ಧ ಹುಷಾರಾಗಿರಿ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ