ಶೀಲ ಶಂಕಿಸಿದ್ದಕ್ಕೆ ಪ್ರಿಯತಮನ ಎದೆಗೆ ಚಾಕು ಇರಿದ ಪ್ರಿಯತಮೆ

ಗುರುವಾರ, 7 ಸೆಪ್ಟಂಬರ್ 2023 (17:40 IST)
ತನ್ನ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಕೋಪಗೊಂಡು ಮಹಿಳೆಯೋರ್ವಳು ಪ್ರಿಯಕರನ ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ. ಘಟನೆ ಬೆಂಗಳೂರಿನ ಹುಳಿಮಾವು ಅಕ್ಷಯ್‌ ನಗರದ ಸರ್ವೀಸ್‌ ಅಪಾರ್ಟ್‌ಮೆಂಟ್ನಲ್ಲಿ ನಡೆದಿದೆ.ಇನ್ನು ಜಾವೇದ್‌  ಕೊಲೆಯಾದ ಯುವಕ. ಕೇರಳದ ಕಣ್ಣೂರು ಮೂಲದ ಜಾವೇದ್‌ ಎನ್ನುವ ಯುವಕ ಹಾಗೂ ಬೆಳಗಾವಿ ಮೂಲದ ರೇಣುಕಾ ಕಳೆದ ಮೂರ್ನಾಲ್ಕು ವರ್ಷಗಳಿಂದ ಲಿವಿಂಗ್ ಟುಗೆದರ್ನಲ್ಲಿದ್ದರು. ಆದ್ರೆ, ಇತ್ತೀಚೆಗೆ ಜಾವೇದ್‌, ರೇಣುಕಾ ಶೀಲದ ಮೇಲೆ ಅನುಮಾನಪಟ್ಟು ಪದೇ ಪದೇ ಗಲಾಟೆ ಮಾಡುತ್ತಿದ್ದ. ಇದೇ ವಿಚಾರವಾಗಿ ಸೆಪ್ಟೆಂಬರ್ 5 ರಂದು ಇಬ್ಬರ ನಡುವೆ ಜಗಳವಾಗಿದ್ದು, ಆ ವೇಳೆ ರೇಣುಕಾ, ಜಾವೇದ್ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ