Bengaluru: ಇಬ್ಬರು ಮಕ್ಕಳಿದ್ದರು ಮತ್ತೇ ಪ್ರೀತಿಯಲ್ಲಿ ಬಿದ್ದ ಮಹಿಳೆ, ಬದುಕು ದುರಂತ ಅಂತ್ಯ

Sampriya

ಸೋಮವಾರ, 9 ಜೂನ್ 2025 (15:59 IST)
ಬೆಂಗಳೂರು: ನಗರದ ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿರುವ ಹೋಟೆಲ್‌ ರೂಂ ಒಳಗೆ ಮಹಿಳೆಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಪ್ರಿಯಕರನೇ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿ, ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. 

ವಿವಾಹಿತ 33ವರ್ಷದ ಹರಿಣಿ ಎಂಬಾಕೆ 25 ವರ್ಷದ ಎಂಜಿನಿಯರ್‌ ಆಗಿರುವ ಯಶಸ್‌ನಿಂದ ಹತ್ಯೆಯಾಗಿರುವುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ. ಎಂಬಾತನೇ ಆಕೆಯ ಮೇಲೆ 17 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. 

ಸುಬ್ರಹ್ಮಣ್ಯಪುರ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಹತ್ಯೆಗೊಳಗಾದ ಹರಿಣಿ ಹಾಗೂ ಆರೋಪಿ ಯಶಸ್‌ ಪ್ರೀತಿಸುತ್ತಿದ್ದರು. ಆದರೆ ಹರಿಣಿ ಸಂಬಂಧವನ್ನು ಮುಂದುವರೆಸಲು ಇಷ್ಟಪಡದೆ, ದೂರವಾಗಲು ನಿರ್ಧರಿಸಿದ್ದಳು. ಇದು ಯಶಸ್ ಕೋಪಕ್ಕೆ ಕಾರಣವಾಗಿದೆ. 

ಹರಿಣಿ ಎರಡು ಮಕ್ಕಳ ತಾಯಿಯಾಗಿದ್ದು, ತನ್ನ ಅಕ್ರಮ ಸಂಬಂಧದ ವಿಚಾರವಾಗಿ ಫ್ಯಾಮಿಲಿಯಲ್ಲಿ ಒತ್ತಡಕ್ಕೆ ಒಳಗಾಗಿದ್ದಳು. ಈ ಸಲುವಾಗಿ ಯಶಸ್ ಜತೆಗಿನ ಸಂಬಂಧದಿಂದ ದೂರುವಿರಲು ನಿರ್ಧರಿಸಿದ್ದರು.  ಇದರಿಂದ ಕೋಪಗೊಂಡ ಯಶಸ್, ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. 

ಜೂನ್ 6ರಂದು ಓಹೋ ಹೊಟೇಲ್‌ನಲ್ಲಿ ಹರಿಣಿ ಹತ್ಯೆಯಾಗಿದ್ದಾಳೆ.  ಕೊಠಡಿ ದೀರ್ಘಕಾಲದವರೆಗೆ ಲಾಕ್ ಆಗಿರುವುದರಿಂದ ಆತಂಕಗೊಂಡ ಹೋಟೆಲ್ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಮಾತ್ರ ಇದು ಬೆಳಕಿಗೆ ಬಂದಿತು. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಕೆಂಗೇರಿ ಮೂಲದ ಯಶಸ್‌ಗಾಗಿ ಹುಡುಕಾಟ ನಡೆಯುತ್ತಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ