ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಮೈದಾನ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಮೂವರು ಆಯೋಜಕರನ್ನು ಬಂಧಿಸಲಾಗಿದೆ.
ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಆರ್ ಸಿಬಿ ಮ್ಯಾನೇಜ್ ಮೆಂಟ್ ನ ಮೂವರು ಆಯೋಜಕರನ್ನು ಬಂಧಿಸಲಾಗಿದೆ. ಓರ್ವನನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ನಿನ್ನೆ ಸಂಜೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಸೇರಿದಂತೆ ಪ್ರಮುಖ ಅಧಿಕಾರಿಗಳ ತಲೆದಂಡವಾಗಿತ್ತು.
ಕೆಂಪೇಗೌಡ ಏರ್ ಪೋರ್ಟ್ ಮಾರ್ಗವಾಗಿ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ಮೂವರು ಆಯೋಜಕರನ್ನು ಬಂಧಿಸಲಾಗಿದೆ. ಮುಂಬೈಗೆ ತೆರಳುತ್ತಿದ್ದ ಆರ್ ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ, ಡಿಎನ್ಎ ಮ್ಯಾನೇಜ್ ಮೆಂಟ್ ಸಿಬ್ಬಂದಿ ಸುನಿಲ್ ಮ್ಯಾಥ್ಯೂ ಕಿರಣ್ ಮತ್ತು ಸುಮಂತ್ ಎಂಬವರನ್ನು ಬಂಧಿಸಲಾಗಿದೆ.
ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಗಳನ್ನು ಏರ್ ಪೋರ್ಟ್ ನಿಂದ ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಪೊಲೀಸರು ಅನುಮತಿ ನಿರಾಕರಿಸಿದರೂ ಆರ್ ಸಿಬಿ ಸೋಷಿಯಲ್ ಮೀಡಿಯಾದಲ್ಲಿ ವಿಕ್ಟರಿ ಪೆರೇಡ್ ಇದೆ ಎಂದು ಆರ್ ಸಿಬಿ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಪೋಸ್ಟ್ ಮಾಡಿ ಡಿಲೀಟ್ ಮಾಡಿರುವ ಆರೋಪ ನಿಖಿಲ್ ಸೋಸಲೆ ಮೇಲಿದೆ.
ಅಲ್ಲದೆ ಉಚಿತ ಪಾಸ್ ಘೋಷಣೆ ಮಾಡಿರುವುದು, ಗೇಟ್ ನಂ.9 ಮತ್ತು 10 ರಲ್ಲಿ ಪಾಸ್ ಸಿಗುತ್ತದೆ ಎಂದು ಹೇಳಿ ಮಧ್ಯಾಹ್ನವಾದರೂ ಟಿಕೆಟ್ ನೀಡಲಿಲ್ಲ. ನಿಖಿಲ್ ಸೂಚನೆಯಂತೇ ಡಿಎನ್ಎ ಕಂಪನಿ ವರ್ತಿಸಿದೆ. ಈ ಎಲ್ಲಾ ಕಾರಣಕ್ಕೆ ಈ ಮೂವರನ್ನು ಬಂಧಿಸಲಾಗಿದೆ.