ಗೂಗಲ್ ಮ್ಯಾಪ್ ನಂಬಿ ಗೋವಾಕ್ಕೆಂದು ಹೊರಟವರು ಭೀಮಘಡ ದಟ್ಟ ಕಾಡಿನಲ್ಲಿ ಸಿಕ್ಕಿಹಾಕಿಕೊಂಡರು
ಬಿಹಾರ ಮೂಲದ ರಂಜಿತ್ ದಾಸ್ ಮತ್ತು ಕುಟುಂಬ ಕಾರು ಮೂಲಕ ಗೋವಾಕ್ಕೆ ಹೊರಟಿದ್ದರು. ದಾರಿ ತಿಳಿಯಲು ಗೂಗಲ್ ಮ್ಯಾಪ್ ಆನ್ ಮಾಡಿಕೊಂಡಿದ್ದರು. ಗೂಗಲ್ ಮ್ಯಾಪ್ ನ ಸಲಹೆಯಂತೇ ತೆರಳುತ್ತಿದ್ದ ರಂಜಿತ್ ದಾಸ್ ಮತ್ತು ಕುಟುಂಬ ಬೆಳಗಾವಿ ಜಿಲ್ಲೆಯ ಭೀಮಘಡ ದಟ್ಟ ಅರಣ್ಯ ಪ್ರದೇಶಕ್ಕೆ ಬಂದು ತಲುಪಿತ್ತು.
ಇದು ತಿಳಿಯುವಷ್ಟರಲ್ಲಿ ಅವರು ದಟ್ಟ ಕಾಡಿನೊಳಗೆ ಸುಮಾರು 6 ರಿಂದ 7 ಕಿ.ಮೀ. ದೂರ ಬಂದಾಗಿತ್ತು. ಅದೂ ಮಧ್ಯರಾತ್ರಿ ಬೇರೆ. ಎತ್ತ ಹೋಗಬೇಕೆಂದು ತಿಳಿಯದೇ ಯಾರನ್ನಾದರೂ ಕರೆಯೋಣವೆಂದರೆ ಮೊಬೈಲ್ ನೆಟ್ ವರ್ಕ್ ಇರಲಿಲ್ಲ. ಅನಿವಾರ್ಯವಾಗಿ ರಂಜಿತ್ ದಾಸ್ ಮತ್ತು ಕುಟುಂಬ ತಮ್ಮ ಕಾರಿನಲ್ಲೇ ಆ ದಟ್ಟ ಕಾಡಿನ ನಡುವೆ ಜೀವ ಕೈಯಲ್ಲಿ ಹಿಡಿದುಕೊಂಡು ರಾತ್ರಿ ಕಳೆಯುವಂತಾಯಿತು.
ಮರುದಿನ ಬೆಳಿಗ್ಗೆಯಾಗುತ್ತಿದ್ದಂತೇ ಸುಮಾರು 4 ಕಿ.ಮೀ. ದೂರ ನಡೆದ ರಂಜಿತ್ ದಾಸ್ ಮೊಬೈಲ್ ನೆಟ್ ವರ್ಕ್ ಬರುವ ಸ್ಥಳ ತಿಳಿದುಕೊಂಡು ಅಲ್ಲಿಂದ ಪೊಲೀಸರಿಗೆ ಸಹಾಯಕ್ಕಾಗಿ ಕರೆ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಕುಟುಂಬದವರನ್ನು ರಕ್ಷಿಸಿದ್ದಾರೆ.