ಬಿಹಾರ ರಾಜಕೀಯ HDD ಟ್ವೀಟ್ ಸಂದೇಶ

ಬುಧವಾರ, 10 ಆಗಸ್ಟ್ 2022 (19:48 IST)
ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಟ್ವೀಟ್ ಮಾಡಿದ್ದಾರೆ. ಬಿಹಾರದಲ್ಲಿ ನಡೆಯುತ್ತಿರುವ ಎಲ್ಲ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಟ್ವೀಟ್ ಮಾಡಿದ್ದಾರೆ. ಆ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯವು ಜನತಾದಳ ಪರಿವಾರ ಒಂದೇ ಸೂರಿನಡಿ ಇದ್ದ ದಿನಗಳನ್ನು ಯೋಚಿಸುವಂತೆ ಮಾಡುತ್ತಿದೆ. ಈ ಜನತಾ ಪರಿವಾರವೇ ದೇಶಕ್ಕೆ ಮೂರು ಪ್ರಧಾನಮಂತ್ರಿಗಳನ್ನು ನೀಡಿದೆ ಎಂದು ದೇವೇಗೌಡರು ಹೇಳಿದ್ದಾರೆ. ವಾಸ್ತವದಲ್ಲಿ ಯುವ ಪೀಳಿಗೆಯು ಒಂದು ನಿರ್ಧಾರಕ್ಕೆ ಬಂದರೆ ಈ ದೇಶಕ್ಕೆ ಉತ್ತಮ ಪರ್ಯಾಯವನ್ನು ನೀಡುವುದಕ್ಕೆ ಸಾಧ್ಯವಾಗುತ್ತದೆ. ಜನತಾ ಪರಿವಾರವು ಬಿಜೆಪಿಗೆ ಪರ್ಯಾಯವಾಗಿ ಬೆಳೆಯಬಹುದಾದ ಶಕ್ತಿಯನ್ನು ಹೊಂದಿದೆ ಎಂದು ದೇವೇಗೌಡರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ