ರಸ್ತೆ ಅಪಘಾತ ಬೈಕ್ ಸವಾರರ ಗಂಭೀರ

ಭಾನುವಾರ, 23 ಜನವರಿ 2022 (14:13 IST)
ಆಯಿಲ್ ಟ್ಯಾಂಕ್ ತುಂಬಿ ಹೋಗುತ್ತಿದ್ದ ಲಾರಿ ದಿಢೀರ್ ಪಲ್ಟಿ ಆಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ಟೌನ್ ಹಾಲ್ ಮುಂಭಾಗದ ಕೆ ಆರ್ ಮಾರುಕಟ್ಟೆ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಲಾರಿ ಪಲ್ಟಿ ಹೊಡೆದ ಪರಿಣಾಮ, ಪಕ್ಕದಲ್ಲೇ ಬರುತ್ತಿದ್ದ ದ್ವಿಚಕ್ರ ವಾಹನ ಲಾರಿ ಕೆಳಗೆ ಸಿಲುಕಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ.
ನರಸಿಂಹ ಮೂರ್ತಿ ದ್ವಿಚಕ್ರ ವಾಹನದ ಸವಾರ ಎಂದು ಹೇಳಲಾಗಿದ್ದು, ಸ್ಥಳಕ್ಕೆ ಮಾರುಕಟ್ಟೆ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ