ಬಿಜೆಪಿಯವರು ಪ್ರತಿ ವಿಚಾರದಲ್ಲೂ ರಾಜಕೀಯ ಮಾಡ್ತಿದ್ದು ಎಲ್ಲ ನಾವೇ ಮಾಡಿದ್ದೇವೆ ಎಂದು ಹೇಳಿಕೊಳ್ತಿದ್ದಾರೆ-ಡಿಕೆಶಿ ವ್ಯಂಗ್ಯ

ಗುರುವಾರ, 28 ಫೆಬ್ರವರಿ 2019 (14:00 IST)
ರಾಮನಗರ : ಭಾರತೀಯ ಯೋಧರನ್ನು ಹತ್ಯೆ ಮಾಡಿದ ಉಗ್ರರನ್ನು ಸಂಹರಿಸಿರುವುದಕ್ಕೆ ಕೇಂದ್ರ ಸರ್ಕಾರವನ್ನು ಹೊಗಳಿ ಬಿಜೆಪಿ ಸಂಸತ ವ್ಯಕ್ತಪಡಿಸಿದ್ದಕ್ಕೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ದೇಶ ರಕ್ಷಣೆ ಮಾಡಬೇಕಾದ್ದು ಎಲ್ಲ ಪಕ್ಷದ ರಾಜಕಾರಣಿಗಳ ಜವಬ್ದಾರಿಯಾಗಿದೆ. ಆದ್ರೆ ಬಿಜೆಪಿಯವರು ಎಲ್ಲ ನಾವೇ ಮಾಡ್ತಿದ್ದೇವೆ ಎಂದು ಹೇಳ್ತಿದ್ದಾರೆ’ ಎಂದು ಟೀಕಿಸಿದ್ದಾರೆ.


ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,’ ದೇಶ ರಕ್ಷಣೆ ಮಾಡಬೇಕಾದ್ದು ಎಲ್ಲ ಪಕ್ಷದ ರಾಜಕಾರಣಿಗಳ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡ್ತಿದೆ ಎಂದು ಅಂದುಕೊಂಡಿದ್ದೇನೆ. ಆದರೆ ಬಿಜೆಪಿ ಪಕ್ಷದವರು ಪ್ರತಿ ವಿಚಾರದಲ್ಲೂ ರಾಜಕೀಯ ಮಾಡ್ತಿದ್ದು ಎಲ್ಲ ನಾವೇ ಮಾಡಿದ್ದೇವೆ ಎಂದು ಹೇಳಿಕೊಳ್ತಿದ್ದಾರೆ. ಪಾಪ 60 ವರ್ಷಗಳಿಂದ ಯಾರು ಏನೂ ಮಾಡ್ಲಿಲ್ಲ, ಎಲ್ಲ ಅವರೇ ಮಾಡ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.


ಲೋಕಸಭಾ ಚುನಾವಣೆ ಹತ್ತಿರ ಬರ್ತಿದೆ. ಬಹಳ ದೊಡ್ಡ ದೊಡ್ಡ ವ್ಯಾಖ್ಯಾನಗಳಾಗುತ್ತಿವೆ. ನಮ್ಮ ಯೋಧರು, ಏರ್ ಫೋರ್ಸ್ ನವರೆಲ್ಲ ಪಾಕಿಸ್ತಾನಕ್ಕೆ ತಿರುಗೇಟು ನೀಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ