ಅಧಿಕಾರದ ಆಸೆಯಿಂದ ಬಿಜೆಪಿಯವರು ಹುಚ್ಚರಾಗಿದ್ದಾರೆ- ದಿನೇಶ್ ಗುಂಡೂರಾವ್

ಶನಿವಾರ, 9 ಫೆಬ್ರವರಿ 2019 (09:29 IST)
ಬೆಂಗಳೂರು : ಬಿಜೆಪಿಯವರು ಅಧಿಕಾರದ ಆಸೆಯಿಂದ ಹುಚ್ಚರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.


ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,’ ಬಿಜೆಪಿ ಆಮಿಷದಿಂದ ನಮ್ಮ ಶಾಸಕರು ತಪ್ಪು ಮಾಡಿದ್ದಾರೆ. ಶಾಸಕರ ನಡೆ ನಮಗೆ ನೋವು ತಂದಿದೆ. ಬಿಜೆಪಿ ಆಮಿಷದಿಂದಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯವರು ಅಧಿಕಾರದ ಆಸೆಯಿಂದ ಹುಚ್ಚರಾಗಿದ್ದಾರೆ, ಅಧಿಕಾರ ಹಿಡಿಯಲೇಬೇಕೆಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಯಡಿಯೂರಪ್ಪ ಅವರು ಹತಾಶರಾಗಿದ್ದಾರೆ ಎಂದು ಹೇಳಿದ್ದಾರೆ.


ವಿಧಾನಸೌಧದಲ್ಲಿ ಆಡಿಯೋ ವಿಚಾರದ ಬಗ್ಗೆ ಮಾತನಾಡಿದ ಅವರು ಆಡಿಯೋ ಬಗ್ಗೆ ಸೂಕ್ತ ತನಿಖೆ ಆಗಬೇಕು. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ. ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಎಂದು ಬಿ ಎಸ್ ಯಡಿಯೂರಪ್ಪ ಹೇಳ್ತಿದ್ದಾರೆ, ಆದರಿಂದ ಈ ಬಗ್ಗೆ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ