ನಾಮಕಾವಸ್ತೆಗಾಗಿ ರಾಜಧಾನಿಯಲ್ಲಿ ರಥಯಾತ್ರೆ ನಡೆಸ್ತಿರುವ ಬಿಜೆಪಿ ನಾಯಕರು

ಭಾನುವಾರ, 19 ಮಾರ್ಚ್ 2023 (19:52 IST)
ರಾಜ್ಯ ಬಿಜೆಪಿ ಘಟಕದ ನೇತೃತ್ವದಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆ ಇಂದು  ಬೆಂಗಳೂರಿನ ಗಾಂಧಿನಗರ ಚಾಮರಾಜಪೇಟೆಯಲ್ಲಿ ನಡೆಯಿತು.ಗಾಂಧಿನರದ ಶ್ರೀರಾಂಪುರದ ಆಂಜನೇಯ ದೇವಾಸ್ಥಾನದಿಂದ ಆರಂಭಗೊಂಡು ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮುಕ್ತಾಯ ಗೋಳಿಸಿದ್ರು, ಇನ್ನು ಚಾಮರಾಜಪೇಟೆಯ ಪಂಚಮುಖಿ ಆಂಜನೇಯ ದೇವಸ್ಥಾನದಿಂದ ಆರಂಭಗೊಂಡ ಬಿಜೆಪಿ ಯಾತ್ರೆ ಮಲೆ ಮಹದೇಶ್ವರ ದೇಗುಲದ ವರೆಗೂ ನಡೆಯಿತು. ಯಾತ್ರೆಯಲ್ಲಿ ಉಸ್ತುವಾರಿಗಳಾದ ಅಶೋಕ್, ಅಶ್ವತ್ಥ ನಾರಾಯಣ, ಸುಧಾಕರ್, ಎಸ್ ಟಿ ಸೋಮಶೇಖರ್, ಗೋಪಾಲಯ್ಯ, ಮಾಧುಸ್ವಾಮಿ ಬಿಜೆಪಿ ಯಾತ್ರೆಯಲ್ಲಿ ಗೈರಾಗಿದ್ರು. ಯಾತ್ರೆಯಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖೆ ಸಂಸದ ಪಿ.ಸಿ ಮೋಹನ್, ಹಾಗೂ ಕೇಶವ, ಸುನೀಲ್ ವೆಂಕಟೇಶ್ ಸೇರಿದಂತೆ ಸ್ಥಳೀಯ ಮುಖಂಡರು ಭಾಗಿಯಾಗಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ