ರಂಗೇರಿದ ಗಾಂಧಿನಗರ ವಿಧಾನಸಭಾ ಕ್ಷೇತ್ರ-ಒಂದೇ ಸ್ಥಳದಲ್ಲಿ ಎರೆಡು ಪಕ್ಷ ಜಿದ್ದಾಜಿದ್ದಿ

ಭಾನುವಾರ, 19 ಮಾರ್ಚ್ 2023 (19:20 IST)
ಇನ್ನೇನು ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಮೂರು ಪಕ್ಷಗಳೂ ಸಹ ಈಗಾಗಲೇ ಅಬ್ಬರದ ಪ್ರಚಾರ ಜೋರಾಗಿದೆ . ಪ್ರಚಾರದ ಜೊತೆ ಜೊತೆಗೆ  ಫ್ರೀ ಕಾರ್ಡ್ , ವಿವಿಧ ಉಡುಗೋರೆಗಳ ವಿತರಣೆ ಭಾರಾಟೆ ಕೂಡ ಜೋರಾಗಿನೆ ಇದೆ.   ಇಂದು ಸಹ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಸಮಯಕ್ಕೆ ಒಂದೇ ಸ್ಥಳದಲ್ಲಿ ಕಾಂಗ್ರೆಸ್ ಬಿಜೆಪಿ ಯಿಂದ ಭರ್ಜರಿ ಪ್ರಚಾರ ನಡೆಯುತ್ತಿದೆ.ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಪರ ಕಾಂಗ್ರೆಸ್ ಫ್ರೀ ಯೋಜನೆ ಗಳ ಕುರಿತು ನೂರಾರು ಆಟೋಗಳು ಕ್ಯಾಂಪೇನ್ ಮೂಲಕ ಪ್ರಚಾರ  ಒಂದು ಕಡೆ ನಡೆಸಿದ್ರೆ , ಇತ್ತ ಬಿಜೆಪಿಯಿಂದಲೂ ವಿಜಯ ಸಂಕಲ್ಪ ರಥಯಾತ್ರೆಯನ್ನ ಶ್ರೀರಾಮಪುರದ ಆಂಜನೇಯ ದೇವಸ್ಥಾನದಿಂದ ಸಿದ್ದತೆ ಮಾಡಿಕೊಂಡಿದ್ದು,ಇಬ್ಬರು ತಾ ಮುಂದು ನಾ ಮುಂದು ಎಂದು ಅಬ್ಬರದ ಪ್ರಚಾರ ಮಾಡ್ತಿದ್ದಾರೆ.ಇವರಿಬ್ಬರ ಪ್ರಚಾರದಿಂದ ವಾಹನ ಸವಾರರು ಕಿರಿಕಿರಿ ಅನುಭವುಸುವಂತಾಗಿತ್ತು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ