ತೀರ್ಪಿನ ಬಳಿಕ ಬಿಜೆಪಿ ನಾಯಕರು ನಮ್ಮ ಪರವಾಗಿ ನಿಲ್ಲಬೇಕು, ನಿಲ್ಲಲೇಬೇಕು- ಎಂಟಿಬಿ ನಾಗರಾಜ್

ಬುಧವಾರ, 13 ನವೆಂಬರ್ 2019 (10:40 IST)
ಬೆಂಗಳೂರು : ಇಂದು ಸುಪ್ರೀಂ ಕೋರ್ಟ್ ನಲ್ಲಿ ಅನರ್ಹರ ತೀರ್ಪು ಪ್ರಕಟವಾಗಲಿದ್ದು, ಈ ಹಿನ್ನಲೆಯಲ್ಲಿ ಟೆನ್ಷನ್ ನಲ್ಲಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬಿಜೆಪಿ ನಾಯಕರು ನಮ್ಮ ಪರ ನಿಲ್ಲಲೇಬೇಕು ಎಂದು ಹೇಳಿದ್ದಾರೆ.



ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸುಪ್ರೀಂಕೊರ್ಟ್ ತೀರ್ಪು ನಮ್ಮ ಪರವಾಗಿ ಬರಲಿದೆ ಎಂಬ ನಂಬಿಕೆ ಇದೆ. ಇನ್ನು ತೀರ್ಪಿನ ಬಳಿಕ ಬಿಜೆಪಿ ನಾಯಕರು ನಮ್ಮ ಪರವಾಗಿ ನಿಲ್ಲಬೇಕು, ನಿಲ್ಲಲೇಬೇಕು ಎಂದು ಹೇಳಿದ್ದಾರೆ.


 

ಅಲ್ಲದೇ ಬಿಜೆಪಿ ಸಂಸದ ಬಚ್ಚೇಗೌಡ ಹಾಗೂ ಅವರ ಪುತ್ರ ಶರತ್ ಬಚ್ಚೇಗೌಡ  ಬಗ್ಗೆ ಮಾತನಾಡಿದ ಎಂಟಿಬಿ, ತಾವು ರಾಜೀನಾಮೆ ನೀಡುವ ಮುನ್ನ ಹೊಸಕೋಟೆ ಕ್ಷೇತ್ರವನ್ನು ನನಗೆ ಬಿಟ್ಟುಕೊಡುವುದಾಗಿ ಅಪ್ಪ-ಮಗ ಹೇಳಿದ್ದಾರೆ. ಆದರೆ ಈಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಅವರಿಬ್ಬರು ನನ್ನ ಜೊತೆ ಚರ್ಚೆಗೆ ಬರಲಿ ಎಂದು ಸವಾಲು ಎಸೆದಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ