ಸಿಎಂ ಪೇಪರ್ ಟೈಗರ್ ಎಂದ ಬಿಜೆಪಿ ಶಾಸಕ

ಭಾನುವಾರ, 4 ನವೆಂಬರ್ 2018 (16:54 IST)
ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ರೈತರ ಸಾಲ ಮನ್ನಾ ವಿಚಾರವಾಗಿ ಸಿಎಂ ಪೇಪರ್ ಟೈಗರ್ ಆಗಿದ್ದಾರೆ ಎಂದು ಬಿಜೆಪಿ ಶಾಸಕ ದೂರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದು, ಬ್ಯಾಂಕ್ ಗಳಿಗೆ ಸರ್ಕಾರಿ ಆದೇಶ ಹೊರಡಿಸಲಿ. ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಆದೇಶ ಹೊರಡಿಸಬೇಕು. ಸರ್ಕಾರಿ ಆದೇಶ ಹೊರಡಿಸಿದ್ರೆ ಯಾಕೆ ನೋಟಿಸ್ ಕೊಡ್ತಾರೆ? ಎಂದು ಪ್ರಶ್ನಿಸಿದರು.

ರೈತರ ಸಾಲಕ್ಕೆ ನಾವು ಜವಾಬ್ದಾರಿ ಎಂದು ಬ್ಯಾಂಕಿಗೆ ಸರ್ಕಾರ ಹೇಳಬೇಕು. ಸಕಾರದ ಬರೀ ಪೇಪರ್ ಹೇಳಿಕೆ ಸಾಲದು. ರೈತರ ಸಾಲ ಮನ್ನಾ ಮಾಡಬೇಕು ಎಂಬುದೇ ನಮ್ಮ ಆಗ್ರಹವಾಗಿದೆ ಎಂದು ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ