ಕಾಂಗ್ರೆಸ್ ಭ್ರಷ್ಟಾಚಾರದ ಹಣ ಹಂಚುತ್ತಿದೆ ಎಂದ ಶ್ರೀರಾಮುಲು

ಶನಿವಾರ, 3 ನವೆಂಬರ್ 2018 (15:25 IST)
ಕಾಂಗ್ರೆಸ್ ಪಕ್ಷದ ನಾಯಕರು ನಾವು ಗೆಲ್ಲುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಹಣದಿಂದ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ನನ್ನ ಜಿಲ್ಲೆಯ ಜನ ಹಣ ತಿರಸ್ಕಾರ ಮಾಡಿದ್ದಾರೆ. ನಮ್ಮ ಜಿಲ್ಲೆಯ ಜನ ನಮ್ಮನ್ನು ಕೈ ಬಿಡೋಲ್ಲ ಎಂದು ಬಿ.ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಹಣ, ಕಸಿದುಕೊಂಡಿರುವ ಹಣವನ್ನು ಕಾಂಗ್ರೆಸ್ ನವರು ಇಲ್ಲಿ ಹಂಚುತ್ತಿದ್ದಾರೆ. ಆದರೆ ಶಾಂತ ಅವರು ಗೆಲ್ಲುವ ವಿಶ್ವಾಸ ಇದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಓದಿರೋರು, ನಾವು ಮನುಷ್ಯರನ್ನು ಓದಿದ್ದೇವೆ. ಇವತ್ತು ಅವರ ಮನೆ , ಆಸ್ತಿ ಜಪ್ತಿಗೆ ನ್ಯಾಯಾಲಯ ಆದೇಶ ನೀಡಿದೆ. ಇದನ್ನು ಸುದ್ದಿ ಮಾಡಿದ್ದಕ್ಕೆ ಪತ್ರಕರ್ತರು ಮೇಲೆ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ. ಪತ್ರಕರ್ತರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಅಂದ್ರೆ, ಬಳ್ಳಾರಿ ಜಿಲ್ಲೆಯ ಜನರನ್ನೂ ಬಿಡ್ತಾರಾ? ಎಂದ ಅವರು,  ಪತ್ರಕರ್ತರ ಮೇಲೆ ಈ ದ್ವೇಷ ಸರಿಯಲ್ಲ. ಅವರ ಕೆಲಸ ಮಾಡಲು ಬಿಡಬೇಕು ಎಂದರು.

ಪ್ರಧಾನಿ ಅವರ ಕೈ ಬಲಪಡಿಸಲು ಶಾಂತ ಗೆಲ್ಲಿಸ್ತಾರೆ ಜನರು. ಒಂಟಿಯಾಗಿದ್ದಿರಿ ಕಣದಲ್ಲಿ ಎಂಬ ವಿಚಾರಕ್ಕೆ ಮನುಷ್ಯ ಯಾರೋಬ್ಬರ ಮೇಲೆ‌ ಅವಲಂಬಿಸಬಾರದು. ಹೋರಾಟ ಇದ್ದಂಗೆ ನಾನು, ಹೋರಾಟ ಮಾಡಿದ್ದೇನೆ. ಜನರಿಗೆ ರಾಮುಲು ಮೇಲೆ‌ ವಿಶ್ವಾಸ ಇದೆ. ಹಾಗಾಗಿ ನಾನು ಏಕಾಂಗಿ ಅಲ್ಲ. ಚುನಾವಣೆ ನೀತಿ ಸಂಹಿತೆ ಸಂಬಂಧ ಚುನಾವಣೆ ಆಯೋಗಕ್ಕೆ ದೂರು ಕೊಡುವೆ, ಅಧಿಕಾರಿಗಳ ಜತೆ ಮಾತನಾಡುವೆ ಎಂದು ಹೇಳಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ