ಬಿಜೆಪಿ ಶಾಸಕ ತಿಪ್ಪರಾಜು ಮನೆಗೆ ಬಂದ ನಾಗಸಾಧುಗಳು

ಶುಕ್ರವಾರ, 22 ಡಿಸೆಂಬರ್ 2017 (10:54 IST)
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಮನೆಗೆ ತೆರಳಿ ಆಶೀರ್ವದಿಸಿದ್ದ ನಾಗಸಾಧುಗಳು ಈಗ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜು ಹವಾಲ್ದಾರ ಅವರನ್ನೂ ಆಶೀರ್ವದಿಸಿದ್ದಾರೆ.

ಕಳೆದ ಮೂರು ದಿನಗಳಿಂದ ರಾಯಚೂರಿನಲ್ಲಿರುವ ನಾಗಸಾಧುಗಳು ಶಾಸಕ ತಿಪ್ಪರಾಜು ಹವಾಲ್ದಾರ್ ಮನೆಗೆ ಕಾರಿನಲ್ಲಿ ಬಂದ ಮೂವರು ನಾಗಸಾಧುಗಳು ನೇರವಾಗಿ ಮನೆಗೆ ಹೋಗಿ ಆಶೀರ್ವದಿಸಿದ್ದಾರೆ.

ಐದು ಸಾವಿರ ರೂಪಾಯಿ ಕಾಣಿಕೆ ನೀಡಿ ಶಾಸಕ ತಿಪ್ಪರಾಜು ಆಶೀರ್ವಾದ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಮಂತ್ರಿಯಾಗಿ ಕೆಂಪು ಕಾರಿನಲ್ಲಿ ನಮ್ಮನ್ನು ನೋಡಲು ಬಾ ಎಂದು ಆಶೀರ್ವದಿಸಿದರು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ