ಕುಮಾರಸ್ವಾಮಿ ಟೀಕೆಗೆ ತಿರುಗೇಟು ಕೊಟ್ಟ ಶೋಭಾ ಕರಂದ್ಲಾಜೆ

ಸೋಮವಾರ, 7 ಅಕ್ಟೋಬರ್ 2019 (10:19 IST)
ಮೈಸೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕೆಗೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.



ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ ಅವರಿಗೆ ರೈತರ ಕಷ್ಟ ನನಗಿಂತಲೂ ಹೆಚ್ಚು ಗೊತ್ತಿದೆ. ಯಾಕಂದ್ರೆ ಅವರು ಆಲೂಗಡ್ಡೆ ಬೆಳೆದು ಶ್ರೀಮಂತರಾದವರು. ನಾನು ಸಾಮಾನ್ಯ ರೈತಳಲ್ಲ ಅಂದರೆ ಏನೆಂದು ಅವರೇ ಹೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

 

ಕುಮಾರಸ್ವಾಮಿ ನನ್ನ ಊರಿಗೆ ಬಂದು ನೋಡಲಿ. ಕರಂದ್ಲಾಜೆ ಚಾರ್ವಕ ಎಲ್ಲಿದೆ? ಯಾವ ಕಾಡಿನಲ್ಲಿ ನೋಡಲಿ? ಆಗ  ಯಾರು ರೈತ, ಯಾರು ರೈತರಲ್ಲ? ಎಂಬುದು ತಿಳಿಯುತ್ತೆ ಎಂದು ಅವರು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

                                                                                                                                          

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ