ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ: ಮಾಜಿ ಸಚಿವ ಸೊಗಡು ಶಿವಣ್ಣ ನಿವಾಸದಲ್ಲಿ ಅತೃಪ್ತರ ಸಭೆ

ಶುಕ್ರವಾರ, 3 ಮಾರ್ಚ್ 2017 (16:20 IST)
ಬಿಜೆಪಿಯಲ್ಲಿ ನಿರ್ಲಕ್ಷಿಸಲಾಗುತ್ತದೆ ಎನ್ನುವ ಅಸಮಾಧಾನದ ಹಿನ್ನೆಲೆಯಲ್ಲಿ ಲಿಂಗಾಯುತ ನಾಯಕರು ಬಿಜೆಪಿ ಮುಖಂಡ ಮಾಜಿ ಸಚಿವ ಸೊಗಡು ಶಿವಣ್ಣ ನಿವಾಸದಲ್ಲಿ ಅತೃಪ್ತರು ಸಭೆ ನಡೆಸಿದ್ದಾರೆ.
 
ತುಮಕೂರಿನ ಊರುಕೇರೆಯ ನಿವಾಸದಲ್ಲಿರುವ ಸೊಗಡು ಶಿವಣ್ಣ ಮನೆಯಲ್ಲಿ ಎರಡನೇ ಹಂತದ ಲಿಂಗಾಯುತ ಅತೃಪ್ತ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 
 
ಬಿಜೆಪಿ ಪಕ್ಷದಲ್ಲಿ ಆರಂಭದಿಂದಲೂ ಲಿಂಗಾಯುತರನ್ನು ನಿರ್ಲಕ್ಷಿಸಲಾಗುತ್ತಿದೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಸಭೆ ನಡೆಸಲಾಗುತ್ತಿದೆ ಎಂದು ಅತೃಪ್ತ ನಾಯಕರು ತಿಳಿಸಿದ್ದಾರೆ.
 
ಸಭೆಯಲ್ಲಿ ಅನೇಕ ಲಿಂಗಾಯುತ ನಾಯಕರು ಸೇರಿದಂತೆ ಮಾಜಿ ಸಚಿವ ರವೀಂದ್ರನಾಥ್, ಎಂ.ಬಿ. ನಂದೀಶ್, ಮಾಜಿ ವಿಧಾನಪರಿಷತ್ ಸದಸ್ಯರು ಪಾಲ್ಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ