ಬಿಜೆಪಿಯವ್ರದ್ದು ಗೋಡ್ಸೆ ಕೇಸರಿ : ಸಿದ್ದರಾಮಯ್ಯ

ಶನಿವಾರ, 18 ಫೆಬ್ರವರಿ 2023 (09:22 IST)
ಬೆಂಗಳೂರು : ನಾವು ಹಾಕಿರುವ ಚೆಂಡು ಹೂ ಕೇಸರಿ ಅಲ್ಲ. ನಮ್ಮದು ವಿವೇಕಾನಂದರ ಕೇಸರಿ. ಬಿಜೆಪಿ ಅವರದ್ದು, ಸಾರ್ವರ್ಕರ್, ಗೋಡ್ಸೆ ಕೇಸರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಿವಿಯಲ್ಲಿ ಹೂ ಇಟ್ಟುಕೊಂಡೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ ಹೇಗಿದೆ ಅಂದ್ರೆ ಮಕ್ಕಳು ಸಾಕಲು ಜವಾಬ್ದಾರಿ ಇಲ್ಲದವರು, ಎಷ್ಟು ಮಕ್ಕಳಾದ್ರು ಹುಟ್ಟಲಿ ಎನ್ನುವವರ ಮನಸ್ಥಿತಿಯಲ್ಲಿ ಇದ್ದಾರೆ.

ಬರೀ ಭರವಸೆಯನ್ನು ನೀಡುವುದೇ ಆಗಿದೆ. ಯಾವುದೂ ಈಡೇರಿಕೆ ಆಗಿಲ್ಲ. ಇದು ಪಾರದರ್ಶಕ, ಉತ್ತರದಾಯಿ ಸರ್ಕಾರವೂ ಅಲ್ಲ ಎಂದು ಕಿಡಿಕಾರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ