ಕುಷ್ಟಗಿ ವಿಧಾನಸಭಾ ಕ್ಷೇತ್ರದ ಅಮರೇಗೌಡ ಬಯ್ಯಪೂರ್‌ಗೆ ಬಿಜೆಪಿ ಗಾಳ

ಬುಧವಾರ, 16 ಮೇ 2018 (20:04 IST)
ಕುಷ್ಟಗಿ ವಿಧಾನಸಭಾ ಕ್ಷೇತ್ರದ ಅಮರೇಗೌಡ ಬಯ್ಯಪೂರ್‌ಗೆ ಬಿಜೆಪಿ ಗಾಳ ಹಾಕಿದ್ದು ಗನ್ ಮ್ಯಾನ್, ಪಿಎಗಳ ಮೂಲಕ ಆಫರ್ ನೀಡಿ ಗಾಳ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯ ಮುಖಂಡರು ಕರೆ ಮಾಡಿದ್ದು ನಿಜ ಅಂತಹ ಬಿಜೆಪಿಯ ಬಣ್ಣವನ್ನ ಕಳಚಿದ್ದನ್ನು ಒಪ್ಪಿಕೊಂಡ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪೂರಯಾವುದೇ ಆಮಿಷಕ್ಕೆ ನಾನು ಕಿವಿಗೊಡುವುದಿಲ್ಲ. ಕಾಂಗ್ರಸ್ ತೊರೆಯುವ ಪ್ರಶ್ನೆನೇ ಇಲ್ಲ ನನಗೆ ಅಧಿಕಾರದ ಆಸೆ ಇಲ್ಲ. ಶಾಸಕನಾಗಿ ದುಡಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾಗಿ ತಿಳಿಸಿದ್ದಾರೆ.
 
ನನ್ನ ಸಮುದಾಯಕ್ಕಿಂತ ಪಕ್ಷ ಮುಖ್ಯ ಲಿಂಗಾಯತ ಸಮುದಾಯದ ಕೆಲ ಬಿಜೆಪಿ ಮುಖಂಡರಿಂದ ಬಯ್ಯಪೂರಗೆ ಒತ್ತಡ ಹಾಕಿದ್ದರು ಬಿಜೆಪಿ ನಾಯಕರ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ