ಶಾಮನೂರು ಮಣಿಸಲು ಬಿಜೆಪಿ ಒಗ್ಗಟ್ಟು

ಶುಕ್ರವಾರ, 27 ಏಪ್ರಿಲ್ 2018 (14:32 IST)
ಶಾಮನೂರು ಮಣಿಸಲು ಬಿಜೆಪಿ ಬಂಡಾಯ ಅಭ್ಯರ್ಥಿಮುಂದಾಗಿದ್ದಾರೆ. ದಾವಣಗೆರೆಯ ದಕ್ಷಿಣ ಕ್ಷೇತ್ರದ ಬಿಜೆಪಿ ಬಂಡಾಯ ಶಮನವಾಗುವ ಲಕ್ಷಣಗಳು ಗೋಚರಿಸಿವೆ. 
ದಾವಣಗೆರೆ ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್ ಗೆ ಟಿಕೆಟ್ ಘೋಷಣೆಯಾಗಿತ್ತು. ಈ ಹಿನ್ನೆಲೆಪ್ರಬಲ ಆಕಾಂಕ್ಷಿಯಾಗಿದ್ದ ಹೆಚ್ .ಎಸ್ .ನಾಗರಾಜ್ ಬಂಡಾಯ ಅಭ್ಯರ್ಥಿಯಾಗಿದ್ದರು. 
 
ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಹೆಚ್. ಎಸ್.  ನಾಗರಾಜ್ ನಾಮಪತ್ರ‌ ಸಲ್ಲಿಕೆ ಮಾಡಿದ್ದರು. ಪ್ರಮುಖ ಮುಖಂಡರ ಸಭೆಯಲ್ಲಿ ಬಂಡಾಯ ಶಮನಗೊಳಿಸಲಾಗಿದೆ. ಯಶವಂತರಾವ್ ಜಾದವ್ ಗೆ ಬೆಂಬಲ ನೀಡುವುದಾಗಿ ಹೇಳಿದ ಹೆಚ್. ಎಸ್ .ನಾಗರಾಜ್ ಹೇಳಿದ್ದಾರೆ. 
 
ಹೀಗಾಗಿ ಹೆಚ್ ಎಸ್ ನಾಗರಾಜ್ ನಾಮಪತ್ರ ಹಿಂಪಡೆಯಲಿದ್ದಾರೆ‌.ಘಟನಾಘಟಿ ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ ರನ್ನು ಎದುರಿಸಲಿರುವ ಯಶವಂತರಾವ್ ಜಾದವ್ ಗೆ ಬೆಂಬಲ ಸಿಕ್ಕಂತಾಗಿದೆ. ಹೀಗಾಗಿ ಬಂಡಾಯ ಶಮನಗೊಳಿಸಿ ಶಾಮನೂರು‌ ಮಣಿಸಲು ಜಿಲ್ಲಾ ಬಿಜೆಪಿ ಮುಂದಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ