ತಮ್ಮ ಬಜೆಟ್ ಘೋಷಣೆಗಳ ಬಗ್ಗೆ ಹೇಳಿಕೊಳ್ಳುತ್ತಾ ಚುನಾವಣಾ ಪ್ರಚಾರ ಮಾಡಿದ ಬೊಮ್ಮಾಯಿ

ಶನಿವಾರ, 11 ಮಾರ್ಚ್ 2023 (17:48 IST)
ಪೌರ ಕಾರ್ಮಿಕರಿಗೆ ಖಾಯಂ ಮಾಡಿದ್ದು ನಿಮ್ಮ ಬಸವರಾಜ ಬೊಮ್ಮಾಯಿ .ಕುರಿಗಾಹಿಗಳಿಗೆ ೩೫೦ ಕೋಟಿ ವೆಚ್ಚದಲ್ಲಿ ಸಹಾಯ ಲಮಾಣಿ ಜನಾಂಗಕ್ಕೆ ಹಕ್ಕು ಪತ್ರ ನೀಡಿದ್ವಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ‌ ಭಾಷಣದ ವೇಳೆ ಹೇಳಿದ್ರು.
 
ಅಲ್ಲದೇ ೫೦ ಸಾವಿರ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ರು.ಕುರುಬರಹಟ್ಟಿ ಗೊಲ್ಲರ ಹಟ್ಟಿ ಲಮಾಣಿ ಸಮುದಾಯಕ್ಕೆ ಇನ್ನು ೧೦ ದಿನದಲ್ಲಿ ೧ ಲಕ್ಷ ಹಕ್ಕುಪತ್ರ ನೀಡುತ್ತೇವೆ.ಸಾಕಷ್ಟು ನಿಗಮಗಳನ್ನ ಮಾಡಿದ್ದೇವೆ.೮೫೦ ಕೋಟಿ ರೂಪಾಯಿ ಎಲ್ಲಾ ನಿಗಮಗಳಿಗೆ ಕೊಟ್ಟಿದ್ದೇವೆ.ನಿಮ್ಮ ಆಶೀರ್ವಾದ ಇರಲಿ ಕಾರ್ಯಕ್ರಮಗಳನ್ನ ಮುಂದುವರಿಸುತ್ತೇವೆ.ಇನ್ನಷ್ಟು ಕಾರ್ಯಕ್ರಮಗಳನ್ನ ಮಾಡುತ್ತೇವೆ.ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ೧ ಸಾವಿರ ರೂಪಾಯಿ ಕೊಡುತ್ತೇವೆ.ವಿದ್ಯಾರ್ಥಿನಿಯರಿಗೆ ಉಚಿತ ಪಾಸ್ ವಿತರಣೆ ಮಾಡ್ತೇವೆ.ಹೀಗೆ ತಮ್ಮ ಬಜೆಟ್ ಘೋಷಣೆಗಳ ಬಗ್ಗೆ ಹೇಳಿಕೊಳ್ಳುತ್ತಾ ಚುನಾವಣಾ ಪ್ರಚಾರವನ್ನ ಸಿಎಂ ಬಸವರಾಜ್ ಬೊಮ್ಮಾಯಿ ಮಾಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ