ಹೈನುಗಾರಿಕೆ ವಿಸ್ತರಣಾ ಅಧಿಕಾರಿ ಹುದ್ದೆಯನ್ನು ಸೃಷ್ಠಿಸುವಂತೆ ಆಗ್ರಹಿಸಿ ಪ್ರತಿಭಟನೆ

ಶನಿವಾರ, 11 ಮಾರ್ಚ್ 2023 (17:27 IST)
ಹೈನುಗಾರಿಕೆ ವಿಸ್ತರಣಾ ಅಧಿಕಾರಿ ಹುದ್ದೆಯನ್ನು ಸೃಷ್ಠಿಸುವಂತೆ ಆಗ್ರಹಿಸಿ ಬೆಂಗಳೂರಿನ ಡೈರಿ ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು
 
ಪ್ರತಿಭಟನೆ ಮಾಡಲಾಗಿದೆ.ಹೈನು ಮಹಾವಿದ್ಯಾಲಯ ಬೆಂಗಳೂರು ಈ ವಿಶ್ವವಿದ್ಯಾಲಯ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕಾ ವಿಶ್ವಾಸಂಸ್ಥೆಯ ಅಂಗಸಂಸ್ಥೆಯಾಗಿದ್ದು,40 ವರ್ಷಗಳಿಂದ ಬಿ ಎ ಸ್ಸಿ. ( ಡೈರಿ ಸೈನ್ಸ್ ) ಬಿ ಟೆಕ್ ಪದವಿ ಕೊಡುತ್ತ ಬಂದಿದೆ.ಆದರೆ ಪಾಸ್ ಆದಾ ಪದವೀಧದರಿಗೆ ಸರ್ಕಾರ ಮಾನ್ಯತೆ ಪಡೆದ ವಿಭಾಗಗಳಲ್ಲಿ ಯಾವುದೇ ಉದ್ಯೋಗ ಸಿಕ್ಕಿಲ್ಲ.ಕರ್ನಾಟಕದ್ಲಲ್ಲಿ ಹೈನುಗಾರಿಕೆಯ 2 ಮಹಾವಿದ್ಯಾಲಯಗಳಿವೆ.ಗುಲ್ಬರ್ಗ ಮತ್ತು ಬೆಂಗಳೂರಿನಲ್ಲಿ ಹೈನು ಮಹಾವಿದ್ಯಾಲಯಗಳನ್ನು ಒಳಗೊಂಡಿದೆ.ಪ್ರತಿ ವರ್ಷ 80 ಪದವೀಧರರು ಹೊರಹೋಗುತ್ತಾರೆ.ಆದರೆ ಯಾವೊಬ್ಬ ವಿದ್ಯಾರ್ಥಿಗೂ ಉದ್ಯೋಗ ಸಿಕ್ಕಿಲ್ಲ ಎಂದು ಪ್ರತಿಭಟನೆ ಮಾಡಲಾಗಿದೆ.
 
ಕಳೆದ 6 ತಿಂಗಳಿನಿಂದ ಪ್ರತಿ ತಾಲೂಕಿನಲ್ಲೂ ಹೈನು ವಿಸ್ತರಣ ಅಧಿಕಾರಿಯನ್ನ ನೇಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು,ಸರ್ಕಾರ ಇದಕ್ಕೆ ಸ್ಪಂದಿಸದ ಕಾರಣ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ