ಚಿಕ್ಕಪ್ಪನ ಮೇಲಿನ ಕೋಪಕ್ಕೆ ಆತನ ಮಗನಿಗೆ ಇಂತಹ ಗತಿ ತಂದ ಯುವಕ

ಭಾನುವಾರ, 25 ಅಕ್ಟೋಬರ್ 2020 (09:46 IST)
ಬೆಂಗಳೂರು : ಚಿಕ್ಕಪ್ಪನ ಮೇಲಿನ ಕೋಪಕ್ಕೆ 22 ವರ್ಷದ ಯುವಕನೊಬ್ಬ ಆತನ  6 ವರ್ಷದ ಮಗನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ನೆಲಮಂಗಳದಲ್ಲಿ ನಡೆದಿದೆ.

ಮೊಹಮ್ಮದ್ ರಿಯಾನ್ ಮೃತಪಟ್ಟ ಬಾಲಕ, ದಾದಾ ಪೀರ್ ಕೊಲೆ ಮಾಡಿದ ಆರೋಪಿ. ಆರೋಪಿ ಬೇರೆ ಧರ್ಮದ ಯುವತಿಯನ್ನು 2 ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದಾನೆ. ಆದರೆ ಚಿಕ್ಕಪ್ಪ ಆ ಮಹಿಳೆಯನ್ನು ಬಿಟ್ಟುಬಿಡುವಂತೆ ಒತ್ತಾಯಿಸಿದ್ದಾನೆ. ಇದರಿಂದ ಕೋಪಗೊಂಡ ಅರೋಪಿ ಚಿಕ್ಕಪ್ಪನ ಮೇಲೆನ ಕೋಪಕ್ಕೆ ಆತನ ಮಗನನ್ನು ಕೊಂದು ದೇಹವನ್ನು ಕಟ್ಟಡದ ಟೆರೇಸ್ ನಲ್ಲಿರುವ ನೀರಿನ ತೊಟ್ಟಿಗೆ ಎಸೆದಿದ್ದಾನೆ.

ಈ ಬಗ್ಗೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ