ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆ 2000 ಕೋಟಿ ರೂ ಘೋಷಿಸಿ- ಶಾಸಕ ರಾಜುಗೌಡರಿಂದ ಸಿಎಂಗೆ ಪತ್ರ

ಬುಧವಾರ, 19 ಫೆಬ್ರವರಿ 2020 (11:18 IST)
ಬೆಂಗಳೂರು : ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನುದಾನ ಘೋಷಿಸುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿ ಶಾಸಕ ರಾಜುಗೌಡರು ಪತ್ರ ಬರೆದಿದ್ದಾರೆ.


ಈಗಾಗಲೇ ಬಿಜೆಪಿ ಸರ್ಕಾರದ ಅಧಿವೇಶನ ಶುರುವಾಗಿದ್ದು ಸದ್ಯದಲ್ಲೆ ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಈ ಹಿನ್ನಲೆಯಲ್ಲಿ ತಮ್ಮ ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡುವಂತೆ ಶಾಸಕರು ಸಿಎಂ ಬಳಿ ಮನವಿ ಮಾಡುತ್ತಿದ್ದಾರೆ.


ಅದೇರೀತಿ ಇದೀಗ ಬಿಜೆಪಿ ಶಾಸಕ ರಾಜುಗೌಡ ನೇತೃತ್ವದಲ್ಲಿ ಶಾಸಕರು, ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆ 2000 ಕೋಟಿ ರೂ ಘೋಷಿಸುವಂತೆ ಸಿಎಂಗೆ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ 10ಕ್ಕೂ ಹೆಚ್ಚು ಶಾಸಕರು ಸಹಿ ಮಾಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ