ಕಾಂಗ್ರೆಸ್ ‌ಸೋಲು ಕಟ್ಟಿಟ್ಟ ಬುತ್ತಿ -ಛಲವಾದಿ ನಾರಾಯಣಸ್ವಾಮಿ

ಶುಕ್ರವಾರ, 17 ಮಾರ್ಚ್ 2023 (17:52 IST)
ಬಿಜೆಪಿಯ ರಾಷ್ಟ್ರೀಯ ‌ಪ್ರ.ಕಾರ್ಯದರ್ಶಿ ಸಿ ಟಿ ರವಿ ಲಿಂಗಾಯತ ‌ಸಮುದಾಯದ ವಿರುದ್ದ ಮಾತಾಡಿದ್ದಾರೆ ಅಂತ ಕಾಂಗ್ರೆಸ್ಸಿಗರು ಹೇಳ್ತಿದ್ದಾರೆ.ಚುನಾವಣೆ ‌ಹತ್ತಿರ ಬರ್ತಿದ್ದಂತೆ ಕಾಂಗ್ರೆಸ್ ಟೂಲ್‌ ಕಿಟ್ ಸಿದ್ದ ಆಗಿರುತ್ತೆ ಅಂತಾ ಕಾಂಗ್ರೆಸ್ ಆರೋಪಕ್ಕೆ ಛಲವಾದಿ ನಾರಾಯಣಸ್ವಾಮಿ ಟಾಂಗ್ ನೀಡಿದ್ದಾರೆ.
 
ಈ ವೇಳೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಸಿಟಿ ರವಿ ಅವರು ಲಿಂಗಾಯತರ ವಿರುದ್ಧ ಒಂದೇ ಒಂದು ಶಬ್ದವೂ ಮಾತಾಡಿಲ್ಲ.ಅವರು ಮಾತಾಡಿರೋ ಒಂದು ಒಂದು ವಿಡಿಯೋ ಇಲ್ಲ.ಕಾಂಗ್ರೆಸ್ ‌ಸೋಲು ಕಟ್ಟಿಟ್ಟ ಬುತ್ತಿ ಅಂತ ಗೊತ್ತಾದ ಮೇಲೆ ‌ಹತಾಶೆಯಿಂದ ಈ ರೀತಿ ಮಾಡ್ತಿದ್ದಾರೆ.ಹಿಂದೆ ಎಸ್ ಡಿ ಪಿ ಐ ಮತ್ತು ಕಾಂಗ್ರೆಸ್ ಒಳ ಒಪ್ಪಂಡ ಮಾಡ್ಕೊಂಡಿದ್ರು.ಅದರಂತೆ ಸಿದ್ದರಾಮಯ್ಯ ಅವರ ಮೇಲಿನ ಕೇಸ್ ವಾಪಾಸ್ ತಗೆದುಕೊಂಡರು.ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡ್ಕೊಂಡು ಕೆಟ್ಟೇವು ಅಂತ ಎಸ್ ಡಿ ಪಿ ಐ ನಾಯಕರೇ ಹೇಳ್ತಿದ್ದಾರೆ.ಕಾಂಗ್ರೆಸ್ ಇಂಜಿನ್ ಓಡ್ತಿಲ್ಲ. ಕಾರಣ ಎರಡು ಡ್ರೈವರ್ ಇದ್ದಾರೆ.ಸಿದ್ದರಾಮಯ್ಯ ಲೆಪ್ಟ್ ಗೆ ಡಿ ಕೆ ರೈಟ್ ಗೆ ಓಡಿಸ್ತಾರೆ.ಹೀಗಾಗಿ ಗಾಡಿ‌ ಮುಂದೆ ಹೋಗ್ತಿಲ್ಲ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ