ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವೆ ಎಂದ ಶಾಸಕನ ಮೇಲೆ ಬಿತ್ತು ಕೇಸ್!

ಗುರುವಾರ, 10 ಜನವರಿ 2019 (17:20 IST)
ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿರುದ್ಧ ದೂರನ್ನು ಚಿತ್ರದುರ್ಗ ನಗರ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಸೆಕ್ಷನ್ 189, 504, 506(2) ipc ಯಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಮರಳು ತೆಗೆಯಲು ಅನುವು ಮಾಡಿಕೊಡದೇ ಹೋದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಗುವುದು ಎಂದು ವಿವಾದಾತ್ಮ ಹೇಳಿಕೆಯನ್ನು ಶಾಸಕ ಚಂದ್ರಪ್ಪ ನೀಡಿದ್ದರು.

ಮರಳಿನ ವಿಚಾರವಾಗಿ ಪ್ರತಿಕಾಗೋಷ್ಠಿ  ನಡೆಸಿದ್ದ ಶಾಸಕ ಚಂದ್ರಪ್ಪ, ಪೊಲೀಸರ ಮೇಲೆ ಆರೋಪ ಮಾಡಿದ್ದರು. ಪೊಲೀಸ್ ಮತ್ತು ಮರಳು ಮಾಫಿಯಾ ಜೊತೆಯಾಗಿ ಮಂತ್ಲಿ ಫಿ‌ಕ್ಸ್ ಮಾಡಿಕೊಂಡಿವೆ ಎಂದು ಆರೋಪಿಸಿದ್ದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ