ಯುವಕನ ಅನುಮಾನಾಸ್ಪದ ಸಾವಿನ ಪ್ರಕರಣ; ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ಕೊಲೆ

ಸೋಮವಾರ, 17 ಫೆಬ್ರವರಿ 2020 (11:10 IST)
ಕೊಪ್ಪಳ: ಯುವಕನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ಕೊಲೆಗೈದ ಆರೋಪ ಕೇಳಿಬಂದಿದೆ.


ಸುರೇಶ್, ಖಾಸಿಮ್, ಫಕೀರಪ್ಪ ವಿರುದ್ಧ ಕೊಲೆಯಾದ ತಾಯಪ್ಪನ ಸೋದರಿ ಆರೋಪ ಮಾಡಿದ್ದಾಳೆ. ಜ.3ರಂದು ತಾಯಪ್ಪ ಗಾಯಗೊಂಡು ನರಳಾಡುತ್ತಿದ್ದ ಹಿನ್ನಲೆ ತಕ್ಷಣ ಆತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜ.23ರಂದು ಮೃತಪಟ್ಟಿದ್ದ. ಈ ಘಟನೆ ಕೊಪ್ಪಳ ತಾಲೂಕಿನ ಬುದಗುಂಪಾ ಗ್ರಾಮದಲ್ಲಿ ನಡೆದಿದೆ.


ಇದೀಗ ಕೊಲೆಯಾದ ತಾಯಪ್ಪನ ಸೋದರಿ, ತಾಯಪ್ಪನ ಸಾವು ಆಕ್ಸಿಡೆಂಟ್ ಅಲ್ಲ ಅದು ಕೊಲೆ. ಮೇಲ್ಜಾತಿ ಯುವತಿಯನ್ನು ಪ್ರೀತಿಸಿದ್ದಕ್ಕೆ ಆತನನ್ನು ಆಕೆಯ ಸಂಬಂಧಿಕರು ಕೊಲೆಗೈದಿದ್ದಾರೆ ಎಂದು ಆರೋಪಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ