ಬಿಜೆಪಿಯವರು ಜಾತಿವಾದಿಗಳಾಗಿದ್ದರಿಂದ ಜಾತಿ ರಾಜಕಾರಣ: ಸಿದ್ದರಾಮಯ್ಯ ಕಿಡಿ

ಬುಧವಾರ, 26 ಜುಲೈ 2017 (21:03 IST)
ಬಿಜೆಪಿಯವರು ಜಾತಿವಾದಿಗಳಾಗಿದ್ದರಿಂದ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
 
ಲಿಂಗಾಯುತ ಸ್ವತಂತ್ರ ಧರ್ಮದ ಬಗ್ಗೆ ನಮಗೆ ಯಾವುದೇ ಮನವಿ ಬಂದಿಲ್ಲ. ಮನವಿ ಬಂದ ಮೇಲೆ ಪರಿಶೀಲನೆ ನಡೆಸಲಾಗುತ್ತದೆ. ಸೂಕ್ತವಾಗಿದ್ದಲ್ಲಿ ಮಾತ್ರ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ದಾರೆ.
 
ಇನ್ನೆರೆಡು ದಿನಗಳಲ್ಲಿ ಮಠಾಧೀಶರೊಂದಿಗೆ ಚರ್ಚೆ ನಡೆಯಲಿದ್ದು, ಚರ್ಚೆಯ ನಂತರ ಯಾವ ತೀರ್ಮಾನ ಹೊರಬರುತ್ತದೆಯೋ ಕಾದು ನೋಡೋಣ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ