ಎಸ್ ಐಟಿ ತನಿಖೆ ಬೇಡ, ನನಗೆ ನಂಬಿಕೆಯಿಲ್ಲ: ಸಿಡಿ ಲೇಡಿ

ಸೋಮವಾರ, 5 ಏಪ್ರಿಲ್ 2021 (09:45 IST)
ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಎಸ್ ಐಟಿ ತಂಡದ ಮೇಲೆ ಯುವತಿ ಅನುಮಾನ ವ್ಯಕ್ತಪಡಿಸಿದ್ದಾಳೆ.


ನನಗೆ ಎಸ್ ಐಟಿ ತನಿಖೆ ಮೇಲೆ ನಂಬಿಕೆಯಿಲ್ಲ. ನಾನು ಸಂತ್ರಸ್ತೆಯೋ, ಆರೋಪಿಯೋ ಎಂದು ಸಂಶಯ ಬರುವಂತೆ ಮಾಡುತ್ತಿದ್ದಾರೆ. ಪೊಲೀಸ್ ಕಮಿಷನರ್ ಗೆ ಮೂರು ಪುಟಗಳ ಪತ್ರ ಬರೆದ ಸಿಡಿ ಲೇಡಿ ಎಸ್ ಐಟಿ ತನಿಖೆ ಮೇಲೆ ನನಗೆ ನಂಬಿಕೆಯಿಲ್ಲ ಎಂದಿದ್ದಾಳೆ.

ಆರೋಪಿಯನ್ನು ರಕ್ಷಿಸುವ ಸಲುವಾಗಿ ನನ್ನನ್ನೇ ಆರೋಪಿಯಾಗಿ ಮಾಡಲಾಗುತ್ತಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿ ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರಲಾಗುತ್ತಿದೆ. ಹೀಗಾಗಿ ಈಗ ವಿಚಾರಣೆ ನಡೆಸುತ್ತಿರುವ ಎಸ್ ಐಟಿ ತಂಡದ ಮೇಲೆ ನನಗೆ ವಿಶ್ವಾಸವೇ ಇಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ