ಹನಿಟ್ರ್ಯಾಪ್ ಏನೆಂದು ನನಗೆ ಗೊತ್ತಿಲ್ಲ: ಡಿ ಸುಧಾಕರ್

ಭಾನುವಾರ, 4 ಏಪ್ರಿಲ್ 2021 (10:43 IST)
ಬೆಂಗಳೂರು: ಸಿಡಿ ಲೇಡಿ ಪ್ರಕರಣದಲ್ಲಿ ಮಾಜಿ ಸಚಿವರೊಬ್ಬರ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಮಾಜಿ ಸಚಿವ ಡಿ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.


ಸಿಡಿ ಲೇಡಿ ಫೋನ್ ನಲ್ಲಿ ಮಾಜಿ ಸಚಿವರೊಬ್ಬರ ಸಂಖ್ಯೆಗೆ ಹಲವು ಬಾರಿ ಕರೆ ಮಾಡಿದ ವಿವರ ಪತ್ತೆಯಾಗಿತ್ತು. ಆ ಮಾಜಿ ಸಚಿವರು ಡಿ ಸುಧಾಕರ್ ಎಂದು ಗುಲ್ಲು ಹಬ್ಬಿತ್ತು. ಈ ಹಿನ್ನಲೆಯಲ್ಲಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಎಸ್ ಐಟಿ ತನಿಖೆಗೆ ಕರೆದರೆ ನಾನು ಸಿದ್ಧ. ನನಗೆ ಹನಿಟ್ರ್ಯಾಪ್ ಗೊತ್ತಿಲ್ಲ. ನಾನು ಇದಕ್ಕೆ ಒಳಗಾಗಿಲ್ಲ. ಇದುವರೆಗೆ ಯಾರೂ ನನ್ನ ಬ್ಲ್ಯಾಕ್ ಮೇಲ್ ಮಾಡಿಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರು ಥಳುಕು ಹಾಕಿಕೊಂಡಿದೆ ಎಂದರೆ ನನಗೇ ಆಶ್ಚರ್ಯವಾಗುತ್ತಿದೆ’ ಎಂದು ಸುಧಾಕರ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ