ಸಿಡಿ ಲೇಡಿ, ರಮೇಶ್ ಜಾರಕಿಹೊಳಿಗೆ ಒಂದೇ ದಿನ ಬುಲಾವ್ ನೀಡಿದ ಎಸ್ ಐಟಿ

ಭಾನುವಾರ, 4 ಏಪ್ರಿಲ್ 2021 (10:36 IST)
ಬೆಂಗಳೂರು: ಸಿಡಿ ಲೇಡಿ ಮತ್ತು ಶಾಸಕ ರಮೇಶ್ ಜಾರಕಿಹೊಳಿಗೆ ವಿಚಾರಣೆಗೆ ಹಾಜರಾಗಲು ಎಸ್ ಐಟಿ ಒಂದೇ ದಿನಕ್ಕೆ ಬುಲಾವ್ ನೀಡಿದೆ.


ನಾಳೆ 10 ಗಂಟೆಗೆ ಸಿಡಿ ಲೇಡಿಗೆ ವಿಚಾರಣೆಗೆ ಹಾಜರಾಗಲು ಎಸ್ ಐಟಿ ಸೂಚನೆ ನೀಡಿದೆ. ಅತ್ತ ರಮೇಶ್ ಜಾರಕಿಹೊಳಿಗೆ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ಆದರೆ ರಮೇಶ್ ಜಾರಕಿಹೊಳಿ ನಾಳೆ ವಿಚಾರಣೆಗೆ ಹಾಜರಾಗುವುದು ಅನುಮಾನ. ಆರೋಗ್ಯ ಸಮಸ್ಯೆ ಹಿನ್ನಲೆಯಲ್ಲಿ ಅವರು ಕಾಲಾವಕಾಶ ಕೇಳುವ ಸಾಧ‍್ಯತೆಯಿದೆ ಎನ್ನಲಾಗಿದೆ. ಈಗಾಗಲೇ ಜಾರಕಿಹೊಳಿ ತಮ್ಮ ವಕೀಲರ ಮೂಲಕ ತಮಗೆ ಆರೋಗ್ಯ ಸಮಸ್ಯೆಯಿದೆ ಎಂದು ಎಸ್ ಐಟಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ನಾಳೆ ವಿಚಾರಣೆಗೆ ಹಾಜರಾಗುವುದು ಅನುಮಾನವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ