ಆದರೆ ತನಿಖೆಯಲ್ಲಿ ಹೆಚ್ಚು ಪ್ರಗತಿ ಕಂಡುಬಂದಿಲ್ಲ ಎಂದು ಸಂಸದೆ ಆರೋಪಿಸಿದ್ದರು. ಈಗ ತನಿಖೆಗೆ ಕೇಂದ್ರ ತನಿಖಾ ದಳ ಎಂಟ್ರಿ ಕೊಟ್ಟರೆ ಮತ್ತೆ ರಾಜ್ಯ, ಕೇಂದ್ರದ ನಡುವೆ ಮತ್ತೊಂದು ಸುತ್ತಿನ ಜಟಾಪಟಿ ನಡೆಯುವುದು ಖಂಡಿತಾ. ಈಗಾಗಲೇ ಮುಡಾ, ವಾಲ್ಮೀಕಿ ಹಗರಣದ ಸುಳಿಯಲ್ಲಿರುವ ರಾಜ್ಯ ಸರ್ಕಾರಕ್ಕೆ ಈ ಪ್ರಕರಣ ಮತ್ತೊಂದು ಉರುಳಾಗಲಿದೆ.