ರಾಜಭವನದಿಂದ ವಿಧೇಯಕಗಳು, ಸುಗ್ರಿವಾಜ್ಞೆಗಳು ವಾಪಸ್ ಆಗುತ್ತಿರುವ ಕುರಿತಂತೆ ರಾಜ್ಯದ ಸಚಿವರುಗಳು, ರಾಜ್ಯಪಾಲರಿಗೆ ಸ್ಪಷ್ಟ ವಿವರಣೆ ನೀಡಲಿ. ಇತ್ತೀಚಿಗೆ ಸಚಿವರು ರಾಜಭವನಕ್ಕೆ ಹೋಗುವುದೇ ಅಪರೂಪವಾಗಿದೆ. ಆದರೆ, ಕಾಂಗ್ರೆಸ್ ಮುಖಂಡ ಉಗ್ರಪ್ಪ ರಾಜ್ಯಪಾಲರ ವಿರುದ್ಧ ಅನಗತ್ಯ ವಾಗ್ದಾಳಿ ನಡೆಸುತ್ತಿದ್ದಾರೆ. ಇಂತವರಿಂದಲೇ ಸರಕಾರ ಹಾಳಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.