ಕೈ ಸಮಾವೇಶಕ್ಕೆ ಮಕ್ಕಳ ಬಳಕೆ

ಶುಕ್ರವಾರ, 29 ನವೆಂಬರ್ 2019 (18:37 IST)
ರಾಜ್ಯದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರ ವೇಳೆ ಬಳಕೆ ಮಾಡಿಕೊಳ್ಳುತ್ತಿರೋ ಆರೋಪ ಕೇಳಿಬಂದಿದೆ.

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಮಕ್ಕಳ ಬಳಕೆ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದ ಚಿಹ್ನೆ ಇರುವ ಶಲ್ಯ, ಟೋಪಿ, ಮತ್ತು ಬಿಲ್ಲೆ ಹಂಚುತ್ತಿರುವ ಮಕ್ಕಳು ಪ್ರಚಾರದಲ್ಲಿ ಪಾಲ್ಗೊಂಡಿದ್ರು.

ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಪಾಲ್ಗೊಂಡಿದ್ರು.

ಗಜಾನನ ಮಂಗಸೂಳಿ ಪರ ಪ್ರಚಾರಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು. ಆಗ ನಡೆದ ಬಹಿರಂಗ ಪ್ರಚಾರಕ್ಕೆ ಮಕ್ಕಳು ಬಂದಿದ್ದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ