ಸದನ ಸಮಿತಿ ರಚನೆ ಒಪ್ಪಿಗೆಗೆ ಸಿಎಂ ನಕಾರ; ಧರಣಿ ನಡೆಸಿದ ಜೆಡಿಎಸ್

ಸೋಮವಾರ, 22 ಮಾರ್ಚ್ 2021 (13:10 IST)
ಬೆಂಗಳೂರು : ಸದನ ಸಮಿತಿ ರಚನೆಗೆ ಜೆಡಿಎಸ್ ಬಿಗಿಪಟ್ಟು ಹಿಡಿದಿದ್ದು, ಸಿಎಂ ಬಿಎಸ್ ಯಡಿಯೂರಪ್ಪ ಸದನ ಸಮಿತಿ ರಚನೆಗೆ ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಜೆಡಿಎಸ್ ಧರಣಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ನಿವೃತ್ತ ಜಡ್ಜ ರಿಂದ ತನಿಖೆ ಮಾಡಿಸೋಣ. ನೀವು ಹೇಳಿದ ಜಡ್ಜ್ ರಿಂದ ತನಿಖೆ ಮಾಡೋಣ ಎಂದು ಸಿಎಂ ಹೇಳಿದ್ದಾರೆ. ಅಲ್ಲದೇ ತಾಂತ್ರಕ ಸಮಿತಿ ರಚಿಸಿ, ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ನಾಯಕರಿಗೆ ಸಚಿವ ಸುಧಾಕರ್ ಭರವಸೆ ನೀಡಿದ್ದಾರೆ.

ಆದರೆ ಸಿಎಂ ಮಾತು ಒಪ್ಪದೆ ಜೆಡಿಎಸ್ ಧರಣಿ ಮುಂದುವರಿಸಿದ್ದು, ಹೀಗಾಗಿ ಸಭಾಪತಿಗಳು ಪರಿಷತ್ ಕಲಾಪ ಮುಂದೂಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ