ಕುರ್ಚಿಯಿಂದ ಕುಸಿದು ಬಿದ್ದು ತಲೆಗೆ ಗಾಯಮಾಡಿಕೊಂಡ ಸಿಎಂ ಸಿದ್ದರಾಮಯ್ಯ!

ಮಂಗಳವಾರ, 3 ಏಪ್ರಿಲ್ 2018 (06:47 IST)
ಮೈಸೂರು : ಸಿಎಂ ಸಿದ್ದರಾಮಯ್ಯ ಅವರು ಕುರ್ಚಿಯಿಂದ ಬಿದ್ದು ತಲೆಗೆ ಗಾಯಮಾಡಿಕೊಂಡ ಘಟನೆ ಸೋಮವಾರದಂದು ಮೈಸೂರು ಜಿಲ್ಲೆಯ ಮಾವಿನ ಹಳ್ಳಿಯಲ್ಲಿ  ನಡೆದಿದೆ.


ಚಾಮುಂಡಿ ವಿಧಾನಸಭಾ ಕ್ಷೇತ್ರದ ಮಾವಿನ ಹಳ್ಳಿಯ ಕಾರ್ತಕರ್ತರೊಬ್ಬರ ಮನೆಗೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರು ಅಲ್ಲಿ ಟೀ ಕುಡಿಯುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದಂತೆ ಕುರ್ಚಿ ಮುರಿದ ಕಾರಣ ಕುಸಿದು ಬಿದ್ದಿದ್ದಾರೆ. ಆಗ ಅವರ ತಲೆ ಹಿಂದೆ ಇರುವ ಶೋಕೆಸ್ ಗೆ ತಗುಲಿ ಸಣ್ಣದಾಗಿ ಗಾಯವಾಗಿದೆ.


ಅಲ್ಲಿನ ಸ್ಥಳೀಯರು ಆಸ್ಪತ್ರೆಗೆ ಹೋಗುವಂತೆ ತಿಳಿಸಿದರೂ ಕೂಡ ಸಿಎಂ ಸಿದ್ದರಾಮಯ್ಯ ಅವರು ನನಗೆ ಏನು ಆಗಿಲ್ಲ. ಪರ್ವಾಗಿಲ್ಲ ನಡೆಯುತ್ತದೆ ಎಂದು ಹೇಳಿದ್ದಾರೆ. ಹಾಗೇ ಹೆಚ್ಚಿನ ಆತಂಕ ಪಡುವ ಸಮಸ್ಯೆ ಏನು ಆಗಿಲ್ಲ ಎಂದು  ಮೂಲಗಳಿಂದ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ