‘ಯಡಿಯೂರಪ್ಪ, ಕುಮಾರಸ್ವಾಮಿ ಅವರಪ್ಪನಾಣೆ ಮುಖ್ಯಮಂತ್ರಿಗಳಾಗಲ್ಲ’

ಮಂಗಳವಾರ, 20 ಮಾರ್ಚ್ 2018 (09:00 IST)
ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಯಡಿಯೂರಪ್ಪ ಅಥವಾ ಕುಮಾರಸ್ವಾಮಿ ಅವರಪ್ಪನಾಣೆಗು ಮುಖ್ಯಮಂತ್ರಿಗಳಾಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
 

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವ ಕನಸು ಬಿಡುವುದು ಒಳ್ಳೆಯದು ಎಂದು ಸಿಎಂ ಸಿದ್ದರಾಮಯ್ಯ ಯಲಬುರ್ಗಾದಲ್ಲಿ ಸುದ್ದಿಗಾರರ ಮುಂದೆ ಹೇಳಿದ್ದಾರೆ.

ಬಿಜೆಪಿಯ ಮಿಷನ್ 150 ಈಗಾಗಲೇ ಠುಸ್ ಆಗಿದೆ. ಇನ್ನು, ಜೆಡಿಎಸ್ ಇರುವುದೇ ಮತ ವಿಭಜನೆ ಮಾಡಲು. ನಮ್ಮ ಅಭ್ಯರ್ಥಿಗಳನ್ನೇ ತಂದು ನಿಲ್ಲಿಸಿ ಮತ ವಿಭಜನೆ ಮಾಡುತ್ತಾರೆ. ಅಧಿಕಾರಕ್ಕೆ ಅಡ್ಡಗಾಲು ಹಾಕುವುದಷ್ಟೇ ಅವರ ಸಾಮರ್ಥ್ಯ. ಅವರಿಂದ ಬೇರೇನೂ ನಡೆಯದು ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ