ಬುದ್ಧಿಜೀವಿಗಳಿಗೆ ಸಿಎಂ ಸಿದ್ದರಾಮಯ್ಯ ಥ್ಯಾಂಕ್ಸ್ ಎಂದಿದ್ದೇಕೆ?!

ಗುರುವಾರ, 10 ಮೇ 2018 (08:05 IST)
ಬೆಂಗಳೂರು: ನಮ್ಮ ಜತೆ ಕೋಮು ಸೌಹಾರ್ದತೆಗಾಗಿ ಹೋರಾಡುತ್ತಿರುವ ಬುದ್ಧಿಜೀವಿಗಳು, ಸಾಹಿತಿಗಳು, ಚಿಂತಕರು, ಕಲಾವಿದರಿಗೆ ಥ್ಯಾಂಕ್ಸ್ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ನಾಡಿನ ಒಂದು ದೊಡ್ಡ ಗುಂಪು ನಮ್ಮ ಪಕ್ಷದ ಕಾರ್ಯಕರ್ತರ ಜತೆಗೆ ನಿಂತು ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದಿಗಳ ಅಪಪ್ರಚಾರಕ್ಕೆ ದಿಟ್ಟತನದಿಂದ ಪ್ರತ್ಯುತ್ತರ ನೀಡುತ್ತಿರುವುದನನ್ನು ಗಮನಿಸಿದ್ದೇನೆ. ಈ ಜಾತ್ಯಾತೀತ ಯುವ ಮನಸ್ಸುಗಳಿಗೆ ನನ್ನದೊಂದು ಸಲಾಮ್ ಎಂದು ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ತಮ್ಮ ಪಕ್ಷದ ಜತೆಗೆ ಕೋಮುಸೌಹಾರ್ದತೆಗಾಗಿ ಹೋರಾಡುತ್ತಿರುವ ಎಲ್ಲಾ ಕಲಾವಿದರು, ಚಿಂತಕರು, ಬುದ್ಧಿಜೀವಿಗಳಿಗೆ ಧನ್ಯಾವದಗಳು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ