ಬೈ ಎಲೆಕ್ಷನ್ ಗೆದ್ದವರಿಗೆ ಒಳ್ಳೆಯ ಮುಹೂರ್ತದಲ್ಲಿ ಸಚಿವ ಸ್ಥಾನ

ಸೋಮವಾರ, 9 ಡಿಸೆಂಬರ್ 2019 (17:18 IST)
ಅಥಣಿ ಮತ್ತು ಕಾಗವಾಡ ಮತಕ್ಷೇತ್ರ ಸೇರಿದಂತೆ ರಾಜ್ಯದ ಹನ್ನೆರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಇದು ಬಿಜೆಪಿ ಪಕ್ಷಕ್ಕೆ ಜನರು ಕೊಟ್ಟ ಕೊಡುಗೆ. ರಾಜ್ಯದಲ್ಲಿ ಅಭಿವೃದ್ಧಿ, ಮತ್ತು ಸುಭದ್ರ ಸರ್ಕಾರಕ್ಕಾಗಿ ಜನ ನಮ್ಮನ್ನು ಗೆಲ್ಲಿಸಿದ್ದಾರೆ. ಹೀಗಂತ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಮೊದಲೇ ಹೇಳಿದಂತೆ ಲೋಕಸಭಾ ಚುನಾವಣೆಗಿಂತ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತೇವೆ ಅಂದಿದ್ದೇವು. ಎರಡೂ ಕ್ಷೇತ್ರಗಳಲ್ಲಿ ಇಬ್ಬರನ್ನು ಗೆಲ್ಲಿಸುವ ಉಸ್ತುವಾರಿ ಕೊಟ್ಟಿದ್ದರು.

ಒಂಚೂರು ಮನಸ್ಸು ಚಂಚಲ ಮಾಡಲಿಲ್ಲ, ಹಗಲು ರಾತ್ರಿ ಶ್ರಮಿಸಿದ್ದೇವೆ. ಗೆಲುವು ನಮ್ಮದಾಗಿರುವ ಖುಷಿ ಇದೆ.

ಆಯ್ಕೆ ಆಗಿರುವ  ಎಲ್ಲರಿಗೂ ಸಚಿವ ಸ್ಥಾನ ಸಿಗುತ್ತದೆ. ಬಿ ಎಸ್ ಯಡಿಯೂರಪ್ಪ ಮಾತು ಕೊಟ್ಟಂತೆ ನಡೆಯುತ್ತಾರೆ.  

ಒಂದು ಒಳ್ಳೆಯ ದಿನ ಹನ್ನೆರಡು ಜನರಿಗೂ ಮಂತ್ರಿಸ್ಥಾನ ಕೊಡುತ್ತಾರೆ ಅಂತ ಹೇಳಿದ್ರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ