ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ತಂದ ಕ್ರೆಡಿಟ್ ಪಡೆಯಲು ಜೆಡಿಎಸ್- ಬಿಜೆಪಿ ನಡುವೆ ಪೈಪೋಟಿ

ಮಂಗಳವಾರ, 27 ನವೆಂಬರ್ 2018 (19:59 IST)
ರೆಬಲ್ ಸ್ಟಾರ್ ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ತಂದ ಕ್ರೆಡಿಟ್ ಪಡೆಯಲು ಜೆಡಿಎಸ್- ಬಿಜೆಪಿ ನಡುವೆ ಪೈಪೋಟಿ ನಡೆದಿದೆ.

ಅಭಿಮಾನಿಗಳ ಒತ್ತಡಕ್ಕೆ ಮಣಿದು ಪಾರ್ಥಿವ ಶರೀರ ತಂದ ಕ್ರಡಿಟ್ ಸಿಎಂಗೆ ಸಲ್ಲಬೇಕು ಎಂದು ಜೆಡಿಎಸ್ ಮುಖಂಡರು ಹೇಳುತ್ತಿದ್ದಾರೆ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಂಡ್ಯಕ್ಕೆ ಪಾರ್ಥಿವ ಶರೀರ ತಂದ ಕೀರ್ತಿ ಸಿಎಂಗೆ ಹೋಗಬೇಕೆಂದು ಪದೇ ಪದೇ ಹೇಳುತ್ತಿದ್ದ ಜೆಡಿಎಸ್ ನಾಯಕರ ಮಾತು ಬಿಜೆಪಿಗರನ್ನು ಕೆರಳಿಸಿದೆ.

ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ತರಲು ಮೋದಿ ಕಾರಣ ಎಂದು ಬಿಜೆಪಿ ಮುಖಂಡರು ವಾದ ಮಾಡುತ್ತಿದ್ದಾರೆ.
ಮಂಡ್ಯಕ್ಕೆ ರಕ್ಷಣಾ ಇಲಾಖೆ ಹೆಲಿಕಾಪ್ಟರ್ ಕಳುಹಿಸಿಕೊಟ್ಟಿದ್ದು ಮೋದಿ ಎಂಬುದು ಬಿಜೆಪಿಗರ ವಾದವಾಗಿದೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಟ್ವೀಟ್ ಮಾಡಿದ್ದಾರೆ ಬಿಜೆಪಿ  ಮುಖಂಡರು. ಅಂಬಿ ಸಾವಿನ ವಿಚಾರದಲ್ಲಿ ಜೆಡಿಎಸ್- ಬಿಜೆಪಿ ಕೆಸರೆರೆಚಾಟ ಶುರುಮಾಡಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ