ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ದೂರು

ಸೋಮವಾರ, 8 ಮೇ 2017 (16:25 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ಆದಾಯ ತೆರಿಗೆ ತನಿಖಾ ಇಲಾಖೆಗೆ ದೂರು ನೀಡಲಾಗಿದೆ.
 
ವರ್ತೂರು ಕನಕದಾಸ್ ಎನ್ನುವವರು ಡಾ.ಯತೀಂದ್ರ ಅವರ ಬೇನಾಮಿ ಆಸ್ತಿ ಅವ್ಯವಹಾರದಡಿ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದಾರೆ. 
 
ಮ್ಯಾಟ್ರಿಕ್ಸ್ ಸಲ್ಯೂಶನ್ಸ್, ಮ್ಯಾಟ್ರಿಕ್ಸ್ ಇಮೇಜಿಂಗ್ ಸೇರಿದಂತೆ ಡಾ.ಯತೀಂದ್ರ ನಿರ್ದೇಶಕರಾಗಿರುವ ಇತರ ಕಂಪೆನಿಗಳ ನೂರಾರು ಕೋಟಿ ರೂಪಾಯಿ ಬೇನಾಮಿ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ